ಶಿರಾಡಿ: ಅಡಿಕೆ ಕಳ್ಳತನ -ದೂರು

0

ನೆಲ್ಯಾಡಿ: ಮನೆಯ ಮೇಲ್ಗಡೆ ರೂಮಿನಲ್ಲಿ ಗೋಣಿ ಚೀಲದಲ್ಲಿ ತುಂಬಿಸಿ ದಾಸ್ತಾನು ಇರಿಸಲಾಗಿದ್ದ ಅಡಿಕೆ ಕಳವುಗೈದಿರುವ ಘಟನೆ ಶಿರಾಡಿ ಗ್ರಾಮದ ಲೋಕೇಶ್ ಎಂಬವರ ಮನೆಯಲ್ಲಿ ನಡೆದಿದೆ.


ಲೋಕೇಶ್ ಅವರು ತಮ್ಮ ಮನೆಯ ಮೇಲ್ಗಡೆ ಇರುವ ರೂಮಿನಲ್ಲಿ ಗೋಣಿಯಲ್ಲಿ ತುಂಬಿಸಿ ಅಡಿಕೆ ದಾಸ್ತಾನು ಮಾಡಿದ್ದರು. ಈ ಪೈಕಿ 6 ಗೋಣಿಗಳನ್ನು ಯಾರೋ ಕಳ್ಳರು ಅ.15ರ ಸಂಜೆಯಿಂದ ಅ.19ರ ಬೆಳಿಗ್ಗಿನ ಅವಧಿಯಲ್ಲಿ ಕಳವು ಮಾಡಿದ್ದಾರೆ ಎಂದು ವರದಿಯಾಗಿದೆ. ಕಳವಾದ ಅಡಿಕೆಯ ಒಟ್ಟು ಮೌಲ್ಯ 48 ಸಾವಿರ ರೂ.ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಲೋಕೇಶ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here