ಪುತ್ತೂರು: 1.4 ಲಕ್ಷ ರೂ.ಮೌಲ್ಯದ ಕರಿಮಣಿ ಸರ ಕಳವು

0


ಪುತ್ತೂರು:ದೇವರ ದರ್ಶನ ಪಡೆದು ಆರತಿ ತೆಗೆದುಕೊಳ್ಳುವ ಸಮಯ ಚಿನ್ನದ ಕರಿಮಣಿ ಸರವೊಂದು ಕಳವಾದ ಘಟನೆ ಬಗ್ಗೆ ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಲಾಗಿದೆ.
ಕಡಬ ತಾಲೂಕು ಇಚ್ಲಂಪಾಡಿ ಬರೆಮೇಲು ದಿನೇಶ್ ಕುಮಾರ್ ಎಂಬವರ ಪತ್ನಿ ಭಾರತಿ ಎಮ್ ಡಿರವರು ಅ.22ರಂದು ಮಧ್ಯಾಹ್ನ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ದೇವರ ದರ್ಶನ ಪಡೆದು ಆರತಿ ತೆಗೆದುಕೊಳ್ಳುವ ಸಮಯ ಅವರ ಕುತ್ತಿಗೆಯಲ್ಲಿದ್ದ 4 ಪವನ್ ತೂಕದ ಕರಿಮಣಿ ಸರವು ಕಳ್ಳತನವಾಗಿದೆ.ಅದರ ಅಂದಾಜು ಮೌಲ್ಯ 1.4 ಲಕ್ಷ ರೂ.ಎಂದು ಸುಬ್ರಹ್ಮಣ್ಯ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here