ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಗಣಪತಿ ಹವನ, ಶಾರದಾ ಪೂಜೆ ಮತ್ತು ಆಯುಧ ಪೂಜೆ

0

ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಶಾರದಾ ಪೂಜೆ, ಆಯುಧ ಪೂಜೆ ಮತ್ತು ಶಾಲಾ ವಾಹನ ಪೂಜೆ ಅ.24ರಂದು ನಡೆಯಿತು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಶಾಲಾ ಆಡಳಿತ ಮಂಡಳಿಯ ಟ್ರಸ್ಟಿ ವೃಂದಾ ಜೆ ರೈ , ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿ ಉದಯ ರೈ ಮಾದೋಡಿ, ಶಾಲಾ ಆಡಳಿತ ಮಂಡಳಿಯ ಸದಸ್ಯ ನಾಗೇಶ್ ರೈ ಮಾಳ, ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ, ಮುಖ್ಯಗುರು ಸರಸ್ವತಿ ಎಂ, ಎಲ್ಲಾ ಶಿಕ್ಷಕವೃಂದದವರು, ಶಿಕ್ಷಕೇತರವೃಂದದವರು, ಪೋಷಕ ಬಂಧುಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು .

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಎರಡು ಪುಟಾಣಿ ವಿದ್ಯಾರ್ಥಿನಿಯರಾದ ಯಾದ್ವಿ ರೈ ಪೆರುವಾಜೆ ಮತ್ತು ಆಶ್ವಿ ರೈ ಮಾದೋಡಿಯವರು ಬಾಲಶಾರದೆಯ ವೇಷಧಾರಿಯಾಗಿ, ಭಕ್ತಿ ಪ್ರಧಾನವಾಗಿ ಕಂಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕುಣಿತ ಭಜನೆ ಆಕರ್ಷಣೀಯವಾಗಿತ್ತು. ವಿದ್ಯಾರ್ಥಿ ವೃಂದ ಮತ್ತು ಶಿಕ್ಷಕ ವೃಂದದವರು ಭಜನೆಯನ್ನು ನಡೆಸಿಕೊಟ್ಟರು. ಶಿಕ್ಷಕಿಯರಾದ ಜಯಶೀಲ ಮತ್ತು ಸವಿತಾ ಕೆ ಸಹಕರಿಸಿದರು. ಕಟ್ಟತ್ತಾರು ಪ್ರಶಾಂತ ಭಟ್ ಅವರ ನೇತೃತ್ವದಲ್ಲಿ ರವಿ ಉಳಿತ್ತಾಯರು ಪೌರೋಹಿತ್ಯ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here