![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುಣಚ : ಮಧ್ಯಪ್ರದೇಶದ ದೇವಾಸ್ ನಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟದಲ್ಲಿ ಪುಣಚ ಶ್ರೀದೇವಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ದಕ್ಷಿಣ ಮಧ್ಯ ಕ್ಷೇತ್ರೀಯವನ್ನು ಪ್ರತಿನಿಧಿಸಿ 3ಚಿನ್ನ ಹಾಗೂ 3ಬೆಳ್ಳಿ ಪದಕ ಗಳಿಸಿ ದೆಹಲಿಯಲ್ಲಿ ನಡೆಯುವ ಎಸ್.ಜಿ.ಎಫ್.ಐ.ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಪುಣಚ ಪರಿಯಾಲ್ತಡ್ಕದಲ್ಲಿ ಅಭಿನಂದನೆ ಹಾಗೂ ಸಂಭ್ರಮಾಚರಣೆ ನ.2ರಂದು ನಡೆಯಿತು.3ಚಿನ್ನ ಹಾಗೂ 3 ಬೆಳ್ಳಿ ಪದಕಗಳನ್ನು ಪಡೆದುಕೊಂಡಿರುವ ವಿದ್ಯಾರ್ಥಿಗಳನ್ನು ತೆರೆದ ಜೀಪಿನಲ್ಲಿ ಪರಿಯಾಲ್ತಡ್ಕ ಪೇಟೆಯಲ್ಲಿ ಸಂಭ್ರಮದ ಮೆರವಣಿಗೆ ನಡೆಯಿತು.
ವಿಶೇಷ ಆಕರ್ಷಣೆ :
ಪುಣಚ ಶ್ರೀ ಮಹಿಷಮರ್ದಿನಿ ಸಿಂಗಾರಿ ಮೇಳ ತಂಡದ ಸದಸ್ಯರ ಚಂಡವಾದನ ಮೆರವಣಿಗೆಗೆ ಶೋಭೆ ನೀಡಿತು.
![](https://puttur.suddinews.com/wp-content/uploads/2023/11/757c4b67-ca0e-4d0b-afbc-9e656cdd91b2.jpg)
ಪುಣಚ ಗ್ರಾ.ಪಂ.ಅಧ್ಯಕ್ಷೆ ಬೇಬಿ ಪಟಿಕಲ್ಲು, ಸದಸ್ಯರು, ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಶಿಕ್ಷಕರು, ಶಿಕ್ಷಕೇತರರು, ವಿದ್ಯಾರ್ಥಿಗಳು, ಕರಾಟೆ ಶಿಕ್ಷಕರು, ಊರಿನ ಗಣ್ಯರು, ಹಾಗೂ ಪೋಷಕರು ಪಾಲ್ಗೊಗೊಂಡರು.