ಬನ್ನೂರು ಹಲಂಗ ಮೆಸ್ಕಾಂ ಪವರ್ ಮ್ಯಾನ್ ಮೋಹನ್‌ದಾಸ್ ಗೌಡರಿಗೆ ಶ್ರದ್ಧಾಂಜಲಿ

0

ಪುತ್ತೂರು: ಬನ್ನೂರು ಹಲಂಗ ನಿವಾಸಿ ಮೆಸ್ಕಾಂ ಪವರ್ ಮ್ಯಾನ್ ಮೋಹನ್‌ದಾಸ್ ಗೌಡ ಅವರ ಉತ್ತರಕ್ರಿಯೆ ನ.3 ರಂದು ಬಪ್ಪಳಿಗೆ ಜೈನ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ವಿದ್ಯುತ್ ಗುತ್ತಿಗೆದಾರರ ಮಾಜಿ ಅಧ್ಯಕ್ಷ ಹರಿಪ್ರಸಾದ್ ಪಿ ಕೆ ನುಡಿನಮನ ಸಲ್ಲಿಸಿದರು. ಊರ ಗೌಡ ಈಶ್ವರ ಗೌಡ ಗೋಳ್ತಿಲ ಆರಂಭದಲ್ಲಿ ಮೋಹನ್ ದಾಸ್ ಗೌಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಈ ಸಂದರ್ಭ ಮೆಸ್ಕಾಂ ಜೆ ಇ ಸುಂದರ್, ಮೋಹನ್‌ದಾಸ್ ಅವರ ಪತ್ನಿ ಮಮತಾ, ಪುತ್ರಿ ಆವ್ಯ ಮತ್ತು ಸಹೋದರರಾದ ಪುತ್ತೂರು ಜ್ಯೋತಿ ಇಲೆಕ್ಟ್ರಿಕಲ್ಸ್‌ನ ಸುಂದರ ಗೌಡ, ಸಿದ್ದಪ್ಪ, ಚೆನ್ನಪ್ಪ ಮತ್ತು ಸಹೋದರಿಯರು, ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ, ಲಕ್ಷ್ಮಣ ಗೌಡ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು. ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಸಹಿತ ಸಿಬ್ಬಂದಿಗಳು ಆಗಮಿಸಿದರು.

LEAVE A REPLY

Please enter your comment!
Please enter your name here