ಉಪ್ಪಿನಂಗಡಿ: ವರದಕ್ಷಿಣೆ ಕಿರುಕುಳ ದೂರು

0

ಉಪ್ಪಿನಂಗಡಿ: ಇಲ್ಲಿನ ಕೊಪ್ಪಳ ನಿವಾಸಿಯಾಗಿದ್ದು ಪ್ರಸಕ್ತ ಬಂಟ್ವಾಳ ತಾಲೂಕು ಉಳಿ ಗ್ರಾಮದ ಕುಕ್ಕಿನಡಿ ಎಂಬಲ್ಲಿ ಪತಿಯ ಮನೆಯಲ್ಲಿದ್ದಾಗ ಪತಿ ಹಾಗೂ ಆತನ ಮನೆ ಮಂದಿ ತನಗೆ ಹೆಚ್ಚುವರಿ ವರದಕ್ಷಿಣೆ ತಂದುಕೊಡುವಂತೆ ಪೀಡಿಸಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿರುತ್ತಾರೆಂದು ಆರೋಪಿಸಿ ಫಾತಿಮಾ ಬಿ. ಎಂಬವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಫಾತಿಮಾ ರವರು ತನ್ನನ್ನು 2018 ರ ನವೆಂಬರ್ 22ರಂದು ವಿವಾಹವಾದ ಕೆ. ನವಾಜ್ ಬಿನ್ ಆದಂ ಎಂಬಾತ ಮದುವೆಯ ವೇಳೆ ನೀಡಲಾದ ಚಿನ್ನಾಭರಣವನ್ನು ಒತ್ತಯಪೂರ್ವಕವಾಗಿ ಪಡೆದುಕೊಂಡು ಬಳಿಕ ಹೆಚ್ಚುವರಿ ವರದಕ್ಷಿಣೆ ತರಬೇಕೆಂದು ಒತ್ತಾಯಿಸಿ ಹಿಂಸಿಸುತ್ತಿದ್ದು, ಈ ಕೃತ್ಯಕ್ಕೆ ಆಕೆಯ ನಾದಿನಿಯ ಗಂಡ ಸಿದ್ದಿಕ್, ಗಂಡನ ಅಣ್ಣ ಅಜೀಜ್, ಅತ್ತೆ ಅಲಿಮಮ್ಮ, ನಾದಿನಿ ಸುಮಯ್ಯ ಕುಮ್ಮಕ್ಕು ನೀಡಿ ಹಿಂಸೆ ನೀಡುತ್ತಿದ್ದರೆಂದೂ, ಮಾತ್ರವಲ್ಲದೆ ತನ್ನ ಗಂಡನ ಪಾಸ್ ಪೋರ್ಟ್ ಹಾಗೂ ಎ ಟಿ ಎಂ ಕಾರ್ಡನ್ನು ತಾನು ಕಳವು ಮಾಡಿರುತ್ತೇನೆಂದು ಸುಳ್ಳು ಆಪಾದನೆ ಮಾಡಿ, ಇದೀಗ ಎರಡನೇ ವಿವಾಹವಾಗಲು ಸಿದ್ದತೆ ನಡೆಸುತ್ತಿದ್ದಾರೆಂದು ಆರೋಪಿಸಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here