ಬೆಳ್ಳಾರೆ : ಅಡಿಕೆ,ಇಲೆಕ್ಟ್ರಿಕ್ ಸ್ವತ್ತುಗಳು ,ಪಾತ್ರೆ ಸಾಮಾಗ್ರಿಗಳ ಕಳ್ಳತನ-ನಾಲ್ವರ ಮೇಲೆ ಪೊಲೀಸ್ ದೂರು

0

ಪುತ್ತೂರು: ಪೆರುವಾಜೆಯಲ್ಲಿ ಮನೆಯ ಕಟ್ಟಡಕ್ಕೆ ಅಳವಡಿಸಿದ್ದ ಇಲೆಕ್ಟ್ರಿಕ್ ಸೊತ್ತುಗಳು ,ಪಾತ್ರೆಗಳು ಹಾಗೂ ಅಡಿಕೆ ಕಳ್ಳತನವಾಗಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ನಾಲ್ಕು ಜನರ ವಿರುದ್ಧ ಪ್ರಕರಣದ ದಾಖಲಾದ ಘಟನೆ ನಡೆದಿದೆ.


ಪೆರುವಾಜೆ ಅಮರನಾಥ ಶೆಟ್ಟಿಯವರು ನೀಡಿದ ದೂರಿನಂತೆ, ಪೆರುವಾಜೆ ಗ್ರಾಮದಲ್ಲಿ ನಾನು ಕಟ್ಟಡವನ್ನು ಹೊಂದಿದ್ದು, ಕಟ್ಟಡಕ್ಕೆ ಅಳವಡಿಸಿದ್ದ ವಿದ್ಯುತ್ ಮೀಟರ್, ಸ್ವಿಚ್ ಬೋರ್ಡ್, ಬಲ್ಬ್ ಇತ್ಯಾದಿ ಎಲೆಕ್ಟ್ರಿಕ್ ಸ್ವತ್ತುಗಳು, ಕಟ್ಟಡದ ಒಳಗೆ 4 ಗೋಣಿಚೀಲ ಗಳಲ್ಲಿ ಸಂಗ್ರಹಿಸಿಟ್ಟ ಹಣ್ಣು ಅಡಿಕೆ ಹಾಗೂ ಪಾತ್ರೆ ಸಾಮಾಗ್ರಿ ಇತ್ಯಾದಿ ಸ್ವತ್ತುಗಳನ್ನು, ದಿನಾಂಕ 01-11-2023 ರಿಂದ ದಿನಾಂಕ 03-11-2023 ರ ಮಧ್ಯೆ ಅವಧಿಯಲ್ಲಿ ಆರೋಪಿಗಳಾದ ಹರೀಶ್, ಬಿನ್ : ನಾರಾಯಣ ರೈ, ,ರೇಷ್ಮಾ ,ಕಿರಣ, ಕಿಶೋರ್ ಎಂಬವರು ತೆಗೆದುಕೊಂದು ಹೋಗಿರುತ್ತಾರೆ ಎಂಬುದಾಗಿ ದೂರು ನೀಡಿದ್ದು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here