ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ-ಬಾವಿಗೆ ಬಿದ್ದು ಮೃತ್ಯು

0

ಪುತ್ತೂರು: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮನೆ ಸಮೀಪದ ಸರಕಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನ.4ರಂದು ನಡೆದಿದೆ.
ಕಬಕ ಗ್ರಾಮದ ತೋಟಗಾರಿಕೆ ಇಲಾಖೆ ಬಳಿಯ ಜನತಾ ಕಾಲೋನಿ ನಿವಾಸಿ ಪಿ.ಕೆ.ವಿಜಯ ಎಂಬವರ ಪುತ್ರ ವಿ.ಪಿ ವೇಣು(44ವ)ರವರು ಬಾವಿಗೆ ಬಿದ್ದು ಮೃತಪಟ್ಟವರು. ಅವರು ಹಲವು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ನ.4ರಂದು ಕಾಣೆಯಾದ ಕುರಿತು ಎಲ್ಲಾ ಕಡೆ ಹುಡುಕಾಡಿದಾಗ ಮನೆಯ ಸಮೀಪದ ಸರಕಾರಿ ಬಾವಿಯ ಬಳಿ ಆತನ ಚಪ್ಪಲಿ ಇರುವ ಕುರಿತು ಮಾಹಿತಿ ಬಂದಂತೆ ಅಗ್ನಿಶಾಮಕದಳದವರಿಗೆ ತಿಳಿಸಲಾಗಿತ್ತು. ಅಗ್ನಿಶಾಮಕದಳದವರು ಸ್ಥಳಕ್ಕೆ ಬಂದು ಬಾವಿಯಲ್ಲಿ ಹುಡುಕಾಡಿದಾಗ ವೇಣು ಅವರ ಮೃತ ದೇಹ ಪತ್ತೆಯಾಗಿತ್ತು. ಘಟನೆ ಕುರಿತು ಪಿ.ಕೆ.ವಿಜಯ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here