ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆಯ ಪ್ರಾಯಶ್ಚಿತ ಕಾರ್ಯಕ್ರಮ

0

ಆಲಂಕಾರು: ಪೆರಾಬೆ ಗ್ರಾಮದ ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಅಷ್ಟ ಮಂಗಲ ಪ್ರಶ್ನೆಯ ಪರಿಹಾರ ಪ್ರಾಯಶ್ಚಿತ ಕಾರ್ಯಕ್ರಮ ನ.1 ರಿಂದ ನ.3 ರ ತನಕ ನಡೆಯಿತು. ನ.1 ರಂದು ಬೆಳಿಗ್ಗೆ ಗಣಪತಿ ಹೋಮ,ಮೃತ್ಯುಂಜಯ ಹೋಮ ಸಾಮೂಹಿಕ ಪ್ರಾರ್ಥನೆ, ಮುಷ್ಠಿಕಾಣಿಕೆ ಸಮರ್ಪಣಾ ಸಾಯಂಕಾಲ ತ್ರಿಷ್ಟುಪ್ ಮಂತ್ರ,ಮಹಾಸುದರ್ಶನ ಹೋಮ, ಚಕ್ರಾಬ್ಜ ಪೂಜೆ,ಆಶ್ಲೇಷ ಬಲಿ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.

ನ.2 ಬೆಳಿಗ್ಗೆ ದುರ್ಗಾತ್ರಿಕಾಲ ಪೂಜೆ ಪ್ರಾರಂಭ,ಸರ್ಪತ್ರಯ ಮಂತ್ರಹೋಮ ಸಂಜೆ ಸುದರ್ಶನ ಹೋಮ,ಅಘೋರ ಹೋಮ,ದುರ್ಗಾ ಪೂಜೆ,ಪ್ರೇತಾಕರ್ಷಣೆ ನಡೆದು ಪ್ರಸಾದ ವಿತರಣೆ ಯಾಗಿ ಅನ್ನಸಂತರ್ಪಣೆ ನಡೆಯಿತು ನ.3 ರಂದು ಬೆಳಿಗ್ಗೆ ತಿಲಹೋಮ,ಪವಮಾನ ಹೋಮ,ಗೀತಾಪಾರಯಾಣ ದ್ವಾದಶ ಮೂರ್ತಿ ಆರಾಧನೆ,ಸಾಯುಜ್ಯ ಪೂಜೆ ಶ್ರೀ ದೇವರಿಗೆ ಶುದ್ದಿಕಲಶಾಭಿಷೇಕ ನಡೆದು ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು.ಕಾರ್ಯಕ್ರಮ ದಲ್ಲಿ ವಿವಿದ ಸಮಿತಿಯ ಪದಾಧಿಕಾರಿಗಳು ಸಮಿತಿ ಸದಸ್ಯರು ಹಾಗು ಭಕ್ತಾಧಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here