ಕೋರಂ ಕೊರತೆ-ಬನ್ನೂರು ಗ್ರಾ.ಪಂ ಸಾಮಾನ್ಯ ಸಭೆ ಮುಂದೂಡಿಕೆ

0

ಪುತ್ತೂರು: ಸದಸ್ಯರ ಕೋರಂ ಕೊರತೆಯಿಂದಾಗಿ ನ.9ರಂದು ನಡೆಯಬೇಕಿದ್ದ ಬನ್ನೂರು ಗ್ರಾಮ ಪಂಚಾಯತ್‌ನ ಸಾಮಾನ್ಯ ಸಭೆಯನ್ನು ಮುಂದೂಡಿರುವ ಘಟನೆ ನಡೆದಿದೆ.
ಸದಸ್ಯರ ಸಾಮಾನ್ಯ ಸಭೆಯನ್ನು ನ.೯ರಂದು ನಿಗಧಿಪಡಿಸಲಾಗಿತ್ತು. ಆದರೆ ಸಭೆಗೆ ಒಟ್ಟು 13 ಮಂದಿ ಸದಸ್ಯರ ಪೈಕಿ ಅಧ್ಯಕ್ಷೆ ಸ್ಮಿತಾ ಹಾಗೂ ಸದಸ್ಯರಾದ ಶ್ರೀನಿವಾಸ ಪೆರ‍್ವೋಡಿ, ಸುಪ್ರಿತಾ ಪ್ರಭು, ಪರಿಣಾಕ್ಷಿ ಹಾಗೂ ವಿಮಲ ಸಭೆಗೆ ಹಾಜರಾಗಿದ್ದರು. ಉಳಿದಂತೆ ಉಪಾಧ್ಯಕ್ಷ ಶೀನಪ್ಪ ಕುಲಾಲ್, ಸದಸ್ಯರಾದ ರಮಣಿ ಡಿ. ಗಾಣಿಗ, ಗಿರಿಧರ ಗೌಡ, ಗಣೇಶ್ ಹೆಗ್ಡೆ, ತಿಮ್ಮಪ್ಪ ಪೂಜಾರಿ, ಜಯ ಏಕ, ರಾಘವೇಂದ್ರ, ಗೀತಾರವು ಸಭೆಗೆ ಗೈರಾಗಿದ್ದರು. ಹೀಗಾಗಿ ಸದಸ್ಯರ ಕೋರಂ ಕೊರತೆಯಿಂದಾಗಿ ಸಭೆಯನ್ನು ರದ್ದುಪಡಿಸಿ, ಮುಂದೂಡಿರುವುದಾಗಿ ತಿಳಿದುಬಂದಿದೆ.

LEAVE A REPLY

Please enter your comment!
Please enter your name here