ರಾಜ್ಯ ಮಟ್ಟದ ಈಜು ಸ್ಪರ್ಧೆ:ವಿವೇಕಾನಂದ ಆ.ಮಾ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

0

ಪುತ್ತೂರು: ವಿದ್ಯಾಭಾರತಿ ಸಂಯೋಜಿತ ಶಾಲೆಗಳ ರಾಜ್ಯ ಮಟ್ಟದ ಈಜು ಸ್ಪರ್ಧೆಯು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ತಣೀಸಂದ್ರ ಬೆಂಗಳೂರು ಇಲ್ಲಿ ನಡೆಯಿತು. ಈ ಸ್ಪರ್ದೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. 

ಕಿಶೋರ ವರ್ಗ ವಿಭಾಗದಲ್ಲಿ ಜಿ.ಪ್ರತೀಕ್ಷಾ ಆಳ್ವ, 10ನೇ ತರಗತಿ(ಪಡುಮಲೆ ಚಂದ್ರಶೇಖರ ಆಳ್ವ ಮತ್ತು ಉಷಾ.ಸಿ.ಆಳ್ವ ದಂಪತಿ ಪುತ್ರಿ)- 100m Free Style, 200m Free Style- ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ, 50m Free Style ನಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ.

10ನೇ ತರಗತಿಯ ವೇದ್‍ವೃತ್ ಭಂಡಾರಿ (ಚಿಲ್ಮೆತ್ತಾರು ಸಂತೋಷ್ ಭಂಡಾರಿ ಮತ್ತು  ಮೀನಾಕ್ಷಿ ಭಂಡಾರಿ ದಂಪತಿ ಪುತ್ರ) – 50m Free Style Relay- ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ, 100m Breast Stroke, 50m Breast Stroke, 50m Free Style ನಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ.

ನಮನ್ ನಾಯ್ಕ್  ( ಸಂದೀಪ್ ನಾಯ್ಕ್  ಮತ್ತು ಡಾ.ನಮಿತ ನಾಯ್ಕ್ ದಂಪತಿ ಪುತ್ರ) 50m Butterfly ನಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ, 100m Free Style ನಲ್ಲಿ – ತೃತೀಯ ಸ್ಥಾನ ಕಂಚಿನ ಪದಕ ಹಾಗೂ 2 ವಿದ್ಯಾರ್ಥಿಗಳು ದಕ್ಷಿಣ ಮಧ್ಯ ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here