ಅರಿಯಡ್ಕ: ಸೂರ್ಯನಾರಾಯಣ ಭಾಗವತ್‌ರಿಂದ ವಿಶೇಷ ಚೇತನೆಗೆ ಲ್ಯಾಪ್‌ಟಾಪ್ ಕೊಡುಗೆ

0

ಪುತ್ತೂರು: ಅರಿಯಡ್ಕ ಗ್ರಾಮದ ಪಾಪೆಮಜಲು ಪೈಲಕಲ್ಲು ಎಂಬಲ್ಲಿನ ವಿಶೇಷ ಚೇತನೆ ಚೈತ್ರಾರವರಿಗೆ ಪಾಣಾಜೆ ದೇವಸ್ಯ ಅಕ್ಷಯದ ನಿವಾಸಿ ಸೂರ್ಯನಾರಾಯಣ ಭಾಗವತ್‌ರವರು ಲ್ಯಾಪ್‌ಟಾಪ್ ಅನ್ನು ಕೊಡುಗೆಯಾಗಿ ನೀಡಿದರು. ಪೈಲಕಲ್ಲು ನಾರಾಯಣ ನಾಯ್ಕ ಮತ್ತು ಗಿರಿಜಾರವರ ಪುತ್ರಿಯಾಗಿರುವ ಚೈತ್ರಾರವರು ವಿಶೇಷ ಚೇತನೆಯಾಗಿದ್ದು ಪದವಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಪ್ರಸ್ತುತ ಮನೆಯಲ್ಲಿಯೇ ಇದ್ದುಕೊಂಡು ಕೆಲಸ ನಿರ್ವಹಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಇವರಿಗೆ ಲ್ಯಾಪ್‌ಟಾಪ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಚೈತ್ರಾರವರಿಗೆ ಲ್ಯಾಪ್‌ಟಾಪ್ ನೀಡುವಂತೆ ಕುಂಬ್ರ ವರ್ತಕರ ಸಂಘದ ವತಿಯಿಂದ ಚೈತ್ರಾಳ ಮನೆಯವರ ಮೂಲಕ ಅರಿಯಡ್ಕ ಗ್ರಾಪಂಗೆ ಮನವಿ ನೀಡಲಾಗಿತ್ತು ಆದರೆ ಪಂಚಾಯತ್‌ನಿಂದ ಯಾವುದೇ ಸ್ಪಂದನೆ ಇಲ್ಲದೆ ಇರುವುದರಿಂದ ಪ್ರಸ್ತುತ ದಾನಿಯೋರ್ವರು ಲ್ಯಾಪ್‌ಟಾಪ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಯತೀಂದ್ರ ಶೆಟ್ಟಿ ಮಠ ಸವಣೂರು, ಹರೀಶ್ ಪೂಜಾರಿ ಮಠಂತಬೆಟ್ಟು, ಪವನ್ ಕುಮಾರ್ ಕಾಪೆಜಾಲು, ಕುಂಬ್ರ ವರ್ತಕರ ಸಂಘದ ಮಾಜಿ ಅಧ್ಯಕ್ಷರುಗಳಾದ ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ, ಹಾಲಿ ಕೋಶಾಧಿಕಾರಿ ಸಂಶುದ್ದೀನ್ ಎ.ಆರ್ ಹಾಗೂ ಚೈತ್ರಾಳ ಮನೆಯವರು ಉಪಸ್ಥಿತರಿದ್ದರು.

ಉದ್ಯೋಗದ ಹುಡುಕಾಟದಲ್ಲಿದ್ದಾರೆ
ಚೈತ್ರಾರವರು ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು ಈಗಾಗಲೇ ಪದವಿ (ಬಿ.ಎ) ವಿದ್ಯಾಭ್ಯಾಸ ಮುಗಿಸಿದ್ದು ಅದರೊಂದಿಗೆ ಕಂಪ್ಯೂಟರ್ ಬೇಸಿಕ್ ಕೋರ್ಸ್ ಕೂಡ ಮುಗಿಸಿದ್ದಾರೆ. ಪ್ರಸ್ತುತ ಮನೆಯಲ್ಲಿಯೇ ಇದ್ದು ಉದ್ಯೋಗದ ಹುಡುಕಾಟದಲ್ಲಿದ್ದಾರೆ. ವಿಶೇಷ ಚೇತನೆಯಾಗಿರುವ ಇವರು ಪರಿಶಿಷ್ಠ ಪಂಗಡಕ್ಕೆ ಸೇರಿದವರಾಗಿದ್ದಾರೆ. ಕುಳಿತಲ್ಲಿಯೇ ಎಲ್ಲಾ ಕೆಲಸ ಮಾಡುವ ಸಾಮರ್ಥ್ಯವಿರುವ ಈಕೆಯ ಬಗ್ಗೆ ಜನಪ್ರತಿನಿಧಿಗಳು ಮಾನವೀಯತೆಯ ಮೂಲಕ ಸರಕಾರಿ ಕೆಲಸ ದೊರಕಿಸಿಕೊಡುವ ಬಗ್ಗೆ ಪ್ರಯತ್ನಿಸಬೇಕಾಗಿದೆ.

LEAVE A REPLY

Please enter your comment!
Please enter your name here