ಉಪ್ಪಿನಂಗಡಿಯಲ್ಲಿ ವಿಶೇಷ ಚೇತನ ಮಗುವಿನೊಂದಿಗೆ ಮಕ್ಕಳ ದಿನಾಚರಣೆ ಆಚರಿಸಿದ ವಿಮ್ ಸದಸ್ಯರು

0

ಪುತ್ತೂರು: ಮಕ್ಕಳ ದಿನಾಚರಣೆ ಅಂಗವಾಗಿ ವಿಮೆನ್ ಇಂಡಿಯಾ ಮೂವ್ಮೆಂಟ್ ಪುತ್ತೂರು ಇದರ ಸದಸ್ಯರು ಉಪ್ಪಿನಂಗಡಿ ಸಮೀಪದ ಮಠ ಬಳಿಯ ವಿಶೇಷ ಚೇತನ ಮಗು ಅನಸ್ ಎಂಬವರ ಕುಟುಂಬವನ್ನು ಭೇಟಿಯಾಗಿ ವಿಶೇಷ ರೀತಿಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಿದರು.ಆ ವಿಶೇಷ ಚೇತನ ಮಗುವಿಗೆ ಸಿಹಿತಿಂಡಿ, ಆಟಿಕೆಗಳು, ಆಹಾರ ಕಿಟ್ ನ್ನು ನೀಡಿ ಹಾಗೂ ಆ ಮಗುವಿನೊಂದಿಗೆ ಹಾಗೂ ಪೋಷಕರೊಂದಿಗೆ ಸಮಯ ಕಳೆದು ವಿಶಿಷ್ಟ ರೀತಿಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಿದರು.

ಕಾರ್ಯಕ್ರಮದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷೆ ಝಾಹಿದಾ ಸಾಗರ್, ಕಾರ್ಯದರ್ಶಿ ಸೌದ ಮಠ, ಪದಾಧಿಕಾರಿಗಳಾದ ಮುಂತಾಝ್ ಉಪ್ಪಿನಂಗಡಿ, ನೆಬಿಸ ಮಠ ಸೇರಿದಂತೆ ವಿಮ್ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here