ಜಲ್ಲಿಕಲ್ಲಿನಿಂದ ಪೊಲೀಸ್‌ಗೆ ಹಲ್ಲೆ-ಆರೋಪಿ ಬಂಧನ

0

ಪುತ್ತೂರು:ಅಮಲು ಪದಾರ್ಥದ ನಶೆಯಲ್ಲಿ ಜಲ್ಲಿಕಲ್ಲಿನಿಂದ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಸಂಚಾರ ಠಾಣೆಯ ಸಿಬ್ಬಂದಿ ಶಿವಪ್ರಸಾದ್ ಎಂಬವರಿಗೆ ಜಲ್ಲಿ ಕಲ್ಲಿನಿಂದ ಹಲ್ಲೆ ಮಾಡಿದ ಆರೋಪಿ ಬಡಗನ್ನೂರು ಮುಂಡೋಲೆ ನಿವಾಸಿ ಹರೀಶ್ ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನ.16ರಂದು ಸಂಜೆ ಸಾರ್ವಜನಿಕ ದೂರಿನ ಮೇರೆಗೆ ಶಿವಪ್ರಸಾದ್‌ರವರು ಹೊಯ್ಸಳ ವಾಹನದಲ್ಲಿ ಬಂದು, ಮಿನಿ ವಿಧಾನಸೌಧದ ಬಳಿ ಇಬ್ಬರು ಮಕ್ಕಳೊಂದಿಗೆ ನಿಂತಿದ್ದ ಮಹಿಳೆಯೋರ್ವರನ್ನು ವಿಚಾರಿಸುತ್ತಿದ್ದಾಗ ಆಕೆಯ ಗಂಡ, ಆರೋಪಿ ಹರೀಶ್ ಅಲ್ಲಿಗೆ ಬಂದು ಪೊಲೀಸ್ ಸಿಬ್ಬಂದಿ ಶಿವಪ್ರಸಾದ್ ಮತ್ತು ಹೊಯ್ಸಳ ವಾಹನ ಚಾಲಕ ಹನುಮಂತ ಅವರನ್ನು ಅವಾಚ್ಯವಾಗಿ ಬೈದುದಲ್ಲದೆ ಪತ್ನಿ ಜೊತೆ ನಿಂತಿದ್ದ ಮಕ್ಕಳಿಗೆ ಜಲ್ಲಿಕಲ್ಲಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದ.ಈ ವೇಳೆ ತಡೆದ ತನಗೆ ಜಲ್ಲಿ ಕಲ್ಲಿನಿಂದ ಹೊಡೆದು ಗಾಯಗೊಳಿಸಿರುವುದಾಗಿ ಆರೋಪಿಸಲಾಗಿದೆ.ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಶಿವಪ್ರಸಾದ್ ಅವರು ನೀಡಿದ್ದ ದೂರಿನ ಮೇರೆಗೆ ಆರೋಪಿ ವಿರುದ್ಧ ಕಲಂ 504, 332,353 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ನಗರ ಪೊಲೀಸರು ಆರೋಪಿಯನ್ನು ಬಂಽಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಽಸಲಾಗಿದೆ.

LEAVE A REPLY

Please enter your comment!
Please enter your name here