ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ನೂತನ ನಾಗನ ಕಟ್ಟೆಗೆ ಶಿಲಾನ್ಯಾಸ

0

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ನೂತನ ನಾಗನ ಕಟ್ಟೆಗೆ ಶಿಲಾನ್ಯಾಸ ಕಾರ್ಯಕ್ರಮ ನ.20ರಂದು ಸೋಮವಾರ ವೇದಮೂರ್ತಿ ಸಂದೀಪ ಕಾರಂತರ ನೇತೃತ್ವದಲ್ಲಿ ವೈದಿಕ ವಿಧಾನಗಳೊಂದಿಗೆ ನೆರವೇರಿತು. ಕಾರ್ಯಕ್ರಮದಲ್ಲಿ ವಾಸ್ತು ಶಿಲ್ಪಿ ಜಗನ್ನಿವಾಸ ರಾವ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಕೋಶಾಧಿಕಾರಿ ಸುಧಾಕರ ರಾವ್ ಆರ್ಯಾಪು, ಗೌರವ ಸಲಹೆಗಾರ ಡಾ.ಸುರೇಶ್ ಪುತ್ತೂರಾಯ, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ದೇವಸ್ಯ, ಸಮಿತಿಯ ಪಧಾಧಿಕಾರಿಗಳಾದ ಜಯಂತ ಶೆಟ್ಟಿ ಕಂಬಳತಡ್ಡ, ಸೀತಾರಾಮ ರೈ ಕೈಕಾರ, ವಿಜಯ ಬಿಎಸ್, ಹರೀಶ ನಾಯಕ್ ಬಳಕ್ಕ, ವಿರೂಪಾಕ್ಷ ಭಟ್ ಮಚ್ಚಿಮಲೆ, ಹರಿಣ ವಸಂತ ಮೇರ್ಲ, ದೇವಯ್ಯ ಗೌಡ ದೇವಸ್ಯ, ಗಿರೀಶ್ ಕಿನ್ನಿಜಾಲ್, ದಾಮೋದರ ರೈ ತೊಟ್ಲ, ವಿಠಲ ರೈ ಮೇರ್ಲ, ಕಿಶೋರ ಗೌಡ ಮರಿಕೆ, ಭಾರತಿ ಶಾಂತಪ್ಪ , ವನಿತಾ ನಾಯಕ್, ತಿಮ್ಮಪ್ಪ ಗೌಡ ಕೂರೇಲು, ಶ್ರೀ ಧರ ರೈ ಮೇರ್ಲ, ಪ್ರಜ್ವಲ್ ರೈ ತೊಟ್ಲ, ಲಕ್ಷ್ಮಣ ಸಂಪ್ಯ, ಸೇಸಪ್ಪ ಆಚಾರ್ಯ, ರಾಧಾಕೃಷ್ಣ ರಾವ್ ಸುಂದರ ವನ, ಚಂದ್ರಕಲಾ ಕಾರ್ಪಾಡಿ, ಹರೀಶ ಪೂಜಾರಿ ಕಾರ್ಪಾಡಿ, ಪೂವಪ್ಪ ಗೌಡ, ರಾಮಣ್ಣ ಗೌಡ ಪರನೀರು, ರಾಮಚಂದ್ರ ಕುಲಾಲ್, ರೋಹಿತ್ ಗೌಡ, ಯಶೋಧರ ಗೌಡ , ದುಗ್ಗಪ್ಪ ಗೌಡ, ಬಾಬು ನಾಯ್ಕ, ತೇಜಸ್ ರೈ, ಹರೀಶ ಪೆಲತ್ತಡಿ, ಮಹೇಶ ಕಿರಣ್, ಕರುಣಾಕರ ರೈ ಡೆಕ್ಕಳಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here