ಉಪ್ಪಿನಂಗಡಿ: ನೇಣು ಬಿಗಿದು ಆತ್ಮಹತ್ಯೆ

0

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಹಿರೆಬಂಡಾಡಿ ಗ್ರಾಮದ ಕೊರಂಬಾಡಿ ಎಂಬಲ್ಲಿನ ನಿವಾಸಿ ನೇಮಣ್ಣ ಗೌಡ(60) ಎಂಬವರು ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಮಂಗಳವಾರ ನಡೆದಿದೆ.
ಇತ್ತೀಚೆಗೆ ಕಾಡಿದ ಅನಾರೋಗ್ಯದಿಂದ ಬೇಸತ್ತು ತನ್ನ ಪತ್ನಿ ಬೀಡಿ ಬ್ರಾಂಚಿಗೆ ಹೋಗಿದ್ದ ವೇಳೆ ಮನೆಯಲ್ಲಿ ಬೇರಾರೂ ಇಲ್ಲದ ಸಮಯ ನೋಡಿ ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಮೃತರು ಪತ್ನಿ , ಒರ್ವ ಪುತ್ರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here