ಇಂದು ನೆಲ್ಯಾಡಿಯಲ್ಲಿ ’ಹೃದಯಾರಾಂ’ ಮೈಂಡ್ ಕೇರ್ ಸೆಂಟರ್ ಶುಭಾರಂಭ

0

ನೆಲ್ಯಾಡಿ: ಹೃದಯಾರಾಂ ಮೈಂಡ್ ಕೇರ್ ಸೆಂಟರ್ ನ.28ರಂದು ನೆಲ್ಯಾಡಿಯಲ್ಲಿ ಶುಭಾರಂಭಗೊಳ್ಳಲಿದೆ.
ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಮಾರ್ ಲಾರೆನ್ಸ್ ಮುಕ್ಕುಝಿ ಅವರು ಉದ್ಘಾಟಿಸಲಿದ್ದಾರೆ. ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‌ನ ವಿಕಾರ್ ರೆ.ಫಾ.ಮಾಥ್ಯು ವೆಟ್ಟಂತಡಮ್, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲು, ನೆಲ್ಯಾಡಿ ಸೈಂಟ್ ಜಾರ್ಜ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ಎಲಿಯಾಸ್‌ರವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ರೆ.ಫಾ.ಟೆಸ್ಸಿ ಮನುವೆಲ್ ಎಸ್.ಹೆಚ್.,ರವರಿಗೆ ಗೌರವಾರ್ಪಣೆ ನಡೆಯಲಿದೆ. ಹೃದಯಾರಾಂ ಸ್ಥಾಪಕ ನಿರ್ದೇಶಕರಾದ ರೆ.ಡಾ| ಟ್ರಿಸ ಪಾಲಕ್ಕಲ್ ಎಸ್.ಹೆಚ್., ನಿರ್ದೇಶಕ ರೆ.ಡಾ| ರಿನ್ಸಿ ಅಗಸ್ಟಿನ್ ಎಸ್.ಹೆಚ್.ರವರು ವಿವಿಧ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.


ಹೃದಯಾರಾಂ ಮೈಂಡ್ ಕೇರ್ ಸೆಂಟರ್‌ನಲ್ಲಿ ಮಾನಸಿಕ ಸಮಸ್ಯೆಗಳಿಗೆ ಈ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ತಜ್ಞ ಸೈಕಾಲಜಿಸ್ಟ್‌ಗಳಿಂದ ಮತ್ತು ನುರಿತ ಕೌನ್ಸಿಲರುಗಳ ಸಹಾಯದಿಂದ ಕೌನ್ಸಿಲಿಂಗ್ ಮತ್ತು ಸೈಕೋ ಥೆರಪಿ ಮೂಲಕ ಪರಿಹಾರ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here