ಕಲ್ಲೇಗ ಮಾಡತ್ತಾರು ಪುಣ್ಯಕುಮಾರ್ ದೈವಸ್ಥಾನ ರಸ್ತೆಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಅಶೋಕ್‌ ರೈ

0

ಕ್ಷೇತ್ರದ 50 ರಸ್ತೆಗೆ ಏಕಕಾಲದಲ್ಲಿ ಅನುದಾನ ಬಿಡುಗಡೆಯಾಗಿದೆ; ರೈ


ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮಾಂತರ ಭಾಗದ ಬಹುಬೇಡಿಕೆಯ ಒಟ್ಟು 50 ರಸ್ತೆಗಳಿಗೆ ಏಕಕಾಲದಲ್ಲಿ ಅನುದಾನ ಬಿಡುಗಡೆಯಾಗಿದ್ದು ಎಲ್ಲಾ ಕಾಮಗಾರಿಗಳಿಗೂ ಗುದ್ದಲಿ ಪೂಜೆ ನಡೆಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ಕಬಕ ಗ್ರಾಮದ ಕಲ್ಲೇಗ ಮಾಡತ್ತಾರು ಪುಣ್ಯಕುಮಾರ್ ದೈವಸ್ಥಾನದ ರಸ್ತೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶದ ರಸ್ತೆಗಳು ಕಾಂಕ್ರಿಟೀಕರಣವಾಗದೆ ಬಾಕಿ ಇದೆ. ಅನೇಕ ಕಡೆಗಳಲ್ಲಿ ಕಾಂಕ್ರಟೀಕರಣವೇ ನಡೆದಿಲ್ಲ. ಕಳೆದ ಚುನಾವಣೆಯ ಸಂದರ್ಭದಲ್ಲಿ ರಸ್ತೆ ಅಭಿವೃದ್ದಿಯ ಬಗ್ಗೆ ಭರವಸೆಯನ್ನು ನೀಡಿದ್ದೆ ಆ ರಸ್ತೆಗಳನ್ನು ಹಂತಹಂತವಾಗಿ ಕಾಂಕ್ರೀಟ್ ಮಾಡಲಾಗುವುದು. ಕಾಮಗಾರಿ ನಡೆಯುವ ವೇಳೆ ಗ್ರಾಮಸ್ಥರೇ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಬೇಕು, ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ ಮತ್ತು ಯಾವುದೇ ಭೃಷ್ಟಾಚಾರವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕರು ಹೇಳಿದರು.


ಕಾರ್ಯಕ್ರಮದಲ್ಲಿ ಕಬಕ ಕಾಂಗ್ರೆಸ್ ವಲಯಾಧ್ಯಕ್ಷ ದಾಮೋದರ್ ಮುರ, ಬಾಲಕೃಷ್ಣ ಪೂಜಾರಿ, ಕಬಕ ಗ್ರಾಪಂ ಮಾಜಿ ಉಪಾಧ್ಯಕ್ಷ ಪ್ರಶಾಂತ್ ಕಬಕ, ಜಿನ್ನಪ್ಪ ಪೂಜಾರಿ ಮುರ, ನಾರಯಣ ಗೌಡ, ಬೂತ್ ಅಧ್ಯಕ್ಷ ಸುಂದರ ಸಫಲ್ಯ, ಸತೀಶ್ ಜೆ ಪಿ, ಚಂಧ್ರಹಾಸ ಗೌಡ, ಪ್ರಸಾದ್ ಗೌಡ, ದಿನೇಶ್ ಸಫಲ್ಯ, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ಜಾನಕಿ ಬಾಲಕೃಷ್ಣ ಗೌಡ, ರಶೀದ್ ಮುರ, ಭಾರತಿ ವಿಠಲ್ ಪೂಜಾರಿ, ದೇವಕಿ ಗೌಡ, ದಿನೇಶ್ ಗೌಡ ಶೇವಿರೆ, ಯಕ್ಷಿತ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here