ಪೆರ್ನೆ ಶ್ರೀ ರಾಮಚಂದ್ರ ಅನುದಾನಿತ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಸತ್ಯನಾರಾಯಣ ರೈ ಕೆ. ಎಮ್. ಅಧಿಕಾರ ಸ್ವೀಕಾರ

0

ವಿಟ್ಲ: ಪೆರ್ನೆ ಶ್ರೀ ರಾಮಚಂದ್ರ ಅನುದಾನಿತ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಸತ್ಯನಾರಾಯಣ ರೈ ಕೆ ಎಮ್ ರವರು ಡಿ.1ರಂದು ಅಧಿಕಾರ ಸ್ವೀಕರಿಸಿದರು.
ಸತ್ಯನಾರಾಯಣ ರೈ ಕೆ. ಎಮ್. ರವರು ಕಳೆದ 10 ವರ್ಷಗಳಿಂದ ಪೆರ್ನೆ ಶ್ರೀ ರಾಮಚಂದ್ರ ಅನುದಾನಿತ ಪ್ರೌಢಶಾಲೆಯಲ್ಲಿ ದ್ಯೆಹಿಕ ಶಿಕ್ಷಣ ಶಿಕ್ಷಕರಾಗಿದ್ದುಕೊಂಡು ಡಿ.1 ರಿಂದ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಅಧಿಕಾರ ಸ್ವೀಕರಿಸಿದ್ದಾರೆ.


ಸತ್ಯನಾರಾಯಣ ರೈ ಕೆ. ಎಮ್. ರವರು ಪ್ರಸ್ತುತ ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ಕೆಲ್ಯಾಡಿ ಎಂಬಲ್ಲಿ ಪತ್ನಿ ರವಿಕಲಾ ರೈ, ಪುತ್ರಿ ಪುತ್ತೂರಿನ ಅಂಬಿಕಾ ವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾಹಿತ್ಯಾ ರೈರವರೊಂದಿಗೆ ನೆಲೆಸಿದ್ದಾರೆ. ನಿಕಟ ಪೂರ್ವ ಮುಖ್ಯೋಪಾಧ್ಯಾಯರಾದ ಚಂದ್ರಹಾಸ ರೈರವರು ಅಧಿಕಾರ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here