ಗಾನಸಿರಿ ಉಪ್ಪಿನಂಗಡಿ ಶಾಖೆಯ ವಾರ್ಷಿಕೋತ್ಸವ ಗಾನಸಿರಿ ಉಬಾರ ಸ್ವರಾಂಜಲಿ

0

ಪುತ್ತೂರು: ನಾಡಿನ ಪ್ರಖ್ಯಾತ ಸುಗಮ ಸಂಗೀತ ಸಂಸ್ಥೆ ಖ್ಯಾತ ಗಾಯಕರು ಡಾ.ಕಿರಣ್ ಕುಮಾರ್ ಗಾನಸಿರಿ ಸಾರಥ್ಯದ ಪುತ್ತೂರು ಗಾನಸಿರಿ ಕಲಾ ಕೇಂದ್ರ ಇದರ ಉಪ್ಪಿನಂಗಡಿ ಶಾಖೆಯ ವಾರ್ಷಿಕೋತ್ಸವ ಗಾನಸಿರಿ ಉಬಾರ ಸ್ವರಾಂಜಲಿ ಉಪ್ಪಿನಂಗಡಿಯ ಶ್ರೀ ಶಕ್ತಿ ಸಭಾಭವನದಲ್ಲಿ ನಡೆಯಿತು.


ಶಕ್ತಿ ಸಭಾ ಭವನದ ಮಾಲಕ ಈಶ್ವರ ಭಟ್ ಕಾರ್ಯಕ್ರಮ ಉದ್ಘಾಟಿಸಿದರು.ಉಪ್ಪಿನಂಗಡಿ ಶಾಖೆಯ ವಿದ್ಯಾರ್ಥಿಗಳು ಕನ್ನಡದ ಮಧುರವಾದ ಸುಮಾರು 42 ಗೀತೆಗಳನ್ನು ಹಾಡಿ ರಂಜಿಸಿದರು.


ಗುರುಗಳಾದ ಡಾ. ಕಿರಣ್ ಕುಮಾರ್ ಮತ್ತು ಸಹಶಿಕ್ಷಕಿ ಶ್ರೀ ಲಕ್ಷ್ಮಿ ಎಸ್ ಪುತ್ತೂರು ಹಾಡಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.ಕೀಬೋರ್ಡ್‌ ನಲ್ಲಿ ಡಾ.ದಿನೇಶ್ ರಾವ್, ರಿದಂ ಪ್ಯಾಡ್ ನಲ್ಲಿ ಸುಹಾಸ್ ಹೆಬ್ಬಾರ್ ಮತ್ತು ತಬಲಾದಲ್ಲಿ ಸುದರ್ಶನ ಆಚಾರ್ಯ ಸಹಕರಿಸಿದರು.

LEAVE A REPLY

Please enter your comment!
Please enter your name here