ಮಾಹಿತಿ ಹಕ್ಕು ಕಾಯ್ದೆ ಬಳಕೆದಾರ ಸಂಜೀವ ಕಬಕ ಅವರಿಗೆ ‘ಕೆಚ್ಚೆದೆಯ ಹೋರಾಟಗಾರ ಪ್ರಶಸ್ತಿ’ ಪ್ರದಾನ

0

ಪುತ್ತೂರು: ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ ಮಾಹಿತಿ ಹಕ್ಕು ವಿಭಾಗದ ವತಿಯಿಂದ ಅಂತರ್ ರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಹಿರಿಯ ಮಾಹಿತಿ ಹಕ್ಕು ಕಾಯ್ದೆ ಬಳಕೆದಾರ ಸಂಜೀವ ಕಬಕ ಅವರಿಗೆ ‘ ಕೆಚ್ಚೆದೆಯ ಹೋರಾಟಗಾರ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.


ಡಿ.10ರಂದು ಬೆಂಗಳೂರು ಗಾಂಧಿಭವನ ಜೆಪಿಎನ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆಯ ರಾಜ್ಯಾಧ್ಯಕ್ಷ ಡಾ.ರಾಘವೇಂದ್ರ ಎಸ್.ಆರ್., ಪ್ರಧಾನ ಕಾರ್ಯದರ್ಶಿ ಸರ್ವೇಶ್ ಕುಮಾರ್, ರಾಜ್ಯ ಸಂಚಾಲಕ ಧನಂಜಯ ಎಂ.ಆರ್., ಮಾಹಿತಿ ಹಕ್ಕು ಬಳಕೆದಾರರ ವಿಭಾಗದ ರಾಜ್ಯ ಮುಖ್ಯ ಸಲಹೆಗಾರ ರಾಮಲಿಂಗೇ ಗೌಡ ಡಿ.ಎಸ್.ಅವರು ಪ್ರಶಸ್ತಿ ಪ್ರದಾನ ಮಾಡಿದರು.

LEAVE A REPLY

Please enter your comment!
Please enter your name here