ಪುತ್ತಿಗೆ ಶ್ರೀಗಳಿಗೆ ಪುತ್ತೂರಿನಲ್ಲಿ ಪರ್ಯಾಯ ಪೂರ್ವ ಪೌರ ಸನ್ಮಾನ – ಸಮಾಲೋಚನಾ ಸಭೆ

0

ಪುತ್ತೂರು: ಉಡುಪಿ ಶ್ರೀ ಕೃಷ್ಣ ಮಠ ಪರ್ಯಾಯ ಪೀಠ ಏರಲಿರುವ ಪುತ್ತಿಗೆ ಶ್ರೀಗಳಿಗೆ ಪುತ್ತೂರಿನಲ್ಲಿ ಜ.4 ರಂದು ಪೌರ ಸನ್ಮಾನ ಮಾಡುವ ಕುರಿತು ಪೂರ್ವಭಾವಿ ಸಭೆಯು ಡಿ.11 ರಂದು ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು.


ಸಭೆಯಲ್ಲಿ ಪೌರ ಸನ್ಮಾನ ಕಾರ್ಯಕ್ರಮ ಯಶಸ್ಸಿನ ಕುರಿತು ಚರ್ಚಿಸಿ ಪೌರ ಸನ್ಮಾನ ಸಮಿತಿ ರಚಿಸಲಾಯಿತು. ಸಮಿತಿ ಗೌರವಾಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ , ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ, ಅಧ್ಯಕ್ಷರಾಗಿ ಸ್ವರ್ಣೊದ್ಯಮಿ‌ ಬಲರಾಮ ಆಚಾರ್ಯ, ಸಂಚಾಲಕರಾಗಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ರಾಜೇಶ್ ಬನ್ನೂರು, ಭಾಸ್ಕರ ಬಾರ್ಯ, ಪ್ರಧಾನಕಾರ್ಯದರ್ಶಿಗಳಾಗಿ ನ್ಯಾಯವಾದಿ ದಿವಾಕರ ನಿಡ್ವಣ್ಣಾಯ ಸಹಿತ ಅನೇಕ ಸಮಿತಿ ರಚಿಸಲಾಯಿತು. ಮುಂದಿನ ಸಭೆಯನ್ನು ಡಿ.19 ಕ್ಕೆ ಮಾಡಲಾಗುವುದು ಎಂದು ನಿರ್ಣಯಿಸಲಾಯಿತು.

LEAVE A REPLY

Please enter your comment!
Please enter your name here