ಕೊಣಾಲು: ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆಗೆ ಅದ್ದೂರಿ ಸ್ವಾಗತ

0

ನೆಲ್ಯಾಡಿ: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಿಂದ ಆಗಮಿಸಿದ ಪವಿತ್ರ ಮಂತ್ರಾಕ್ಷತೆಯನ್ನು ಡಿ.11ರಂದು ಸಂಜೆ ಕಡಬ ಶ್ರೀ ದುರ್ಗಾಂಬಾ ದೇವಸ್ಥಾನದಿಂದ ಸ್ವೀಕರಿಸಿ ಕೊಣಾಲು ಗ್ರಾಮದ ಪಾಂಡಿಬೆಟ್ಟು ಶ್ರೀ ಶಿವಗಿರಿ ಅಯ್ಯಪ್ಪ ಭಜನಾ ಮಂದಿರಕ್ಕೆ ಕಲಶ ಹಾಗೂ ಭಜನೆಯೊಂದಿಗೆ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಶಿವಗಿರಿ ಅಯ್ಯಪ್ಪ ಭಜನಾ ಮಂಡಳಿಯ ಅಧ್ಯಕ್ಷರಾದ ಕೆ.ಕುಮಾರನ್ ಪಾಂಡಿಬೆಟ್ಟು, ಅಯೋಧ್ಯೆಯ ಕರಸೇವೆಯಲ್ಲಿ ಪಾಲ್ಗೊಂಡ ಪೂವಪ್ಪ ಗೌಡ ಎಣ್ಣೆತ್ತೋಡಿ, ತಿಮ್ಮಪ್ಪ ಗೌಡ ಕಾಯರ್ತಡ್ಕ, ಉಮೇಶ್ ಗೌಡ ಸಂಕೇಶ, ಶೀಲಾ ಕುಮಾರನ್ ಪಾಂಡಿಬೆಟ್ಟು, ಪ್ರಮೀಳಾ ಗಾಣದಕೊಟ್ಟಿಗೆ, ರಮ್ಯ ಮಣ್ಣಮಜಲು, ತಿಲಕ್ ಎಣ್ಣೆತ್ತೋಡಿ, ವಿಶ್ವಾಸ್ ಕಾಯರ್ತಡ್ಕ, ಬಾಬು ಗೌಡ ಅನಲೆ, ಪ್ರವೀಣ್ ಗೌಡ ಮಣ್ಣಮಜಲು ಹಾಗೂ ಭಜನಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು. ಜನವರಿಯಿಂದ ಪವಿತ್ರ ಮಂತ್ರಾಕ್ಷತೆಯನ್ನು ಪ್ರತಿ ಮನೆಗಳಿಗೂ ತಲುಪಿಸುವ ಕಾರ್ಯ ನಡೆಯಲಿದೆ.

LEAVE A REPLY

Please enter your comment!
Please enter your name here