ಪುತ್ತೂರು ಕೆಂಪು ಕಲ್ಲು ಉತ್ಪಾದಕರ ಮತ್ತು ಮಾರಾಟಗಾರರ ಸಂಘದ ಸಭೆ-ಕೆಂಪು ಕಲ್ಲು ವ್ಯವಹಾರ ಪುನರಾರಂಭ-ಸಭೆಯಲ್ಲಿ ತೀರ್ಮಾನ

0

ಪುತ್ತೂರು: ಪುತ್ತೂರು ಕೆಂಪು ಕಲ್ಲು ಉತ್ಪಾದಕರ ಮತ್ತು ಮಾರಾಟಗಾರರ ಸಂಘದ ಸಭೆ ಲಯನ್ಸ್ ಕ್ಲಬ್‌ನಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಹೇಮಚಂದ್ರ ಮುರ ಅಧ್ಯಕ್ಷತೆ ವಹಿಸಿದ್ದರು. ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದ ಕೆಂಪು ಕಲ್ಲು ವ್ಯವಹಾರವನ್ನು ಪುನರಾರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ನೂತನ ದರ ನಿಗದಿಪಡಿಸಲಾಯಿತು. ಭರತ್ ಈಶ್ವರಮಂಗಲ ಸ್ವಾಗತಿಸಿದರು. ಸಂಘದ ಮಾಜಿ ಅಧ್ಯಕ್ಷ ಸುಧಾಕರ ಶೆಟ್ಟಿ ಮಂಗಳಾದೇವಿ, ವಿಟ್ಲ ವಲಯ ಅಧ್ಯಕ್ಷ ರಮೇಶ್ ವಿ., ಉಪ್ಪಿನಂಗಡಿ ವಲಯ ಅಧ್ಯಕ್ಷ ಸಮದ್, ಪುತ್ತೂರು ವಲಯ ಕಾರ್ಯದರ್ಶಿ ರಫೀಕ್ ಎನ್.ಆರ್.ಕೆ., ಕೋಶಾಧಿಕಾರಿ ರವಿಶಂಕರ್ ಯಾದವು ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here