ಡಾ. ಸೌರಭಾ ಜಯರಾಮರವರಿಗೆ ಪದವಿ ಪ್ರದಾನ

0

ಪುತ್ತೂರು: ಸುಳ್ಯದ ಕೆ.ವಿ.ಜಿ.ಆಯುರ್ವೇದ ಮಹಾವಿದ್ಯಾಲಯದಲ್ಲಿ ಪದವಿ ಪೂರೈಸಿದ ವೈದ್ಯರುಗಳಿಗೆ ಆಯುರ್ವೇದ ಕಾಲೇಜಿನ ಧನ್ವಂತರಿ ಸಭಾಂಗಣದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಕೆ ರಮೇಶ್ ಅವರು ಪುತ್ತೂರಿನ ಡಾ.ಸೌರಭಾ ಅವರಿಗೆ ಪದವಿ ಪ್ರದಾನ ಮಾಡಿದರು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ ಚಿದಾನಂದ್, ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ.ಯ ಸೆನೆಟ್ ಮೆಂಬರ್ ಡಾ.ಐಶ್ವರ್ಯ, ಎಂ.ಒ.ಎಲ್.ಇ.ನ ಉಪಾಧ್ಯಕ್ಷೆ ಶೋಭಾ ಚಿದಾನಂದ್, ಪ್ರಾಂಶುಪಾಲ ಡಾ.ಲೀಲಾಧರ ಡಿ.ವಿ, ಡಾ.ಭಾಗ್ಯೇಶ್, ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಡಾ.ಕೆ.ವಿ ಹೇಮಂತ್, ಡಾ.ಗೌತಮ್,ಎಂ.ಜಿ ಡಾ.ಹರ್ಷಿತಾ, ಡಾ.ಅಶೋಕ್, ಡಾ.ಪ್ರತಿಮಾ ಗುಪ್ತಾ,ಡಾ.ತಿರುಮಲೇಶ್ವರ ಭಟ್, ಡಾ.ವೇಣುಗೋಪಾಲ್, ಡಾ.ಹರ್ಷವರ್ಧನ್, ಡಾ.ಸನತ್, ಡಾ.ಕವಿತಾ ಮೊದಲಾದವರು ಉಪಸ್ಥಿತರಿದ್ದರು.

ಸೌರಭಾ ಜಯರಾಮ ಅವರು ಪ್ರಸ್ತುತ ಎಂ.ಡಿ (ಆಯುರ್ವೇದ ವಾಚಸ್ಪತಿ)ಯನ್ನು ಕೊಪ್ಪಳದ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಮಾಡುತ್ತಿದ್ದಾರೆ. ಪುತ್ತೂರಿನ ಸಾಹಿತಿ, ಸಂಘಟಕಿ, 34 ನೆಕ್ಕಿಲಾಡಿಯ ಶಾಂತಾ ಸಭಾಭವನದ ಮಾಲಕಿ ಶಾಂತಾ ಕುಂಠಿನಿ ಮತ್ತು ರವಿ ಕುಂಠಿನಿ ಇವರ ಪುತ್ರಿಯಾಗಿರುವ ಸೌರಭಾ ಅವರು ಜಯರಾಮ ಉಳುವಾನ ಇವರ ಪತ್ನಿ.

LEAVE A REPLY

Please enter your comment!
Please enter your name here