ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘ-ಅಧ್ಯಕ್ಷ: ಗುರುಪ್ರಸಾದ್ ಕೆ., ಉಪಾಧ್ಯಕ್ಷ: ಹೊನ್ನಪ್ಪ ಗೌಡ

0

ನೆಲ್ಯಾಡಿ: ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಗುರುಪ್ರಸಾದ್ ಕೆ. ಲಕ್ಷ್ಮೀ ನಿವಾಸ ನೆಲ್ಯಾಡಿ ಹಾಗೂ ಉಪಾಧ್ಯಕ್ಷರಾಗಿ ಕೆ.ಹೊನ್ನಪ್ಪ ಗೌಡ ದೋಂತಿಲ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಡಿ.23ರಂದು ಸಂಘದ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿ ನಿರ್ದೇಶಕರ ಸಭೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಿತು. ಸಭೆಯಲ್ಲಿ ನಿರ್ದೇಶಕರಾದ ಡಿ.ಮಹಾಬಲ ಶೆಟ್ಟಿ ದೋಂತಿಲ, ಪ್ರೇಮಾವತಿ ಕಟ್ಟೆಮಜಲು, ಜಯರಾಮ ಬಾಣಜಾಲು, ಉಮೇಶ ಪೊಟ್ಟುಕೆರೆ, ದಯಾನಂದ ಹಳೆಮುಂಡ್ಲ, ಹೇಮಾವತಿ ಕೋಡಿಮಕ್ಕಿ, ಪಿ.ಕಾಂತಪ್ಪ ಗೌಡ ಪೂವಾಜೆ, ಗಿರಿಜ ಮೊರಂಕಲ, ಕೆ.ವೆಂಕಪ್ಪ ನಾಯ್ಕ್, ಸೇಸಮ್ಮ ಪರಾರಿ ನೆಲ್ಯಾಡಿ, ವಾರಿಜ ತೊಟ್ಟಿಲಗುಂಡಿ ನೆಲ್ಯಾಡಿ ಉಪಸ್ಥಿತರಿದ್ದರು. ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್.ಚುನಾವಣಾಧಿಕಾರಿಯಾಗಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುರಾಧ ಹೆಚ್., ಹಾಗೂ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here