ಬಿದ್ದು ಸಿಕ್ಕಿದ್ದ ಹಣದ ಪರ್ಸನ್ನು ಹಿಂದಿರುಗಿಸಿ ಮಾನವೀಯತೆ

0

ಪುತ್ತೂರು: ಕಲ್ಲಾರೆ ನಿವಾಸಿ, ನಿವೃತ್ತ ಕೆ.ಎಸ್.ಆರ್.ಟಿ.ಸಿ ಉದ್ಯೋಗಿ ಹೆನ್ರಿ ಗಲ್ಬಾವೋರವರು ಕಾರ್ಯದ ನಿಮಿತ್ತ ಪುಣಚಕ್ಕೆ ಹೋದ ಸಂದರ್ಭ ಹೆನ್ರಿ ಗಲ್ಬಾವೋರವರ ಹಣದ ಪರ್ಸೊಂದು ಕಳೆದುಹೋಗಿತ್ತು. ಪುಣಚ ದೇವಿನಗರದ ಸುಂದರ ನಾಯ್ಕ ಅವರು ಪುಣಚದ ಕಡೆ ಬೈಕಿನಲ್ಲಿ ಹೋಗುತ್ತಿದ್ದಾಗ ಮಾರ್ಗದ ಮಧ್ಯೆ ಪರ್ಸೊಂದು ಬಿದ್ದಿರುವುದು ಕಂಡು ಬಂದಿತ್ತು. ಕೂಡಲೇ ಅವರು ಪರ್ಸಿನಲ್ಲಿದ್ದ ಡಾಕ್ಯುಮೆಂಟ್ ಅನ್ನು ಕಲ್ಪವೃಕ್ಷ ವಾಟ್ಸಪ್ ಗ್ರೂಪಿನಲ್ಲಿ ಹರಿಯಬಿಟ್ಟಿದ್ದರು. ಇದರಿಂದಾಗಿ ಬಿದ್ದಿರುವ ಪರ್ಸ್ ವಾರೀಸುದಾರ ಕಲ್ಲಾರೆಯ ಹೆನ್ರಿ ಗಲ್ಬಾವೋ ಅಂತ ತಿಳಿದ ಮೇಲೆ ಸುಂದರ ನಾಯಕ್ ರವರು ಹೆನ್ರಿ ಗಲ್ಬಾವೋರವರನ್ನು ಸಂಪರ್ಕಿಸಿ ಬಿದ್ದು ಸಿಕ್ಕಿರುವ ಪರ್ಸನ್ನು ಪರ್ಸ್ ವಾರೀಸುದಾರ ಹೆನ್ರಿ ಗಲ್ಬಾವೋರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪರ್ಸನ್ನು ಹಿಂದಿರುಗಿಸಿ ಮಾನವೀಯತೆ ಮೆರೆದ ಸುಂದರ ನಾಯಕ್ ರವರಿಗೆ ಹೆನ್ರಿ ಗಲ್ಬಾವೋ ಹಾಗೂ ಹೆನ್ರಿ ಗಲ್ಬಾವೋರವರ ಪುತ್ರ ಅವಿನ್ ಗಲ್ಬಾವೋರವರು ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here