ಅಮೈ-ಕೂಂಕ್ಯ- ಪಳ್ಳತ್ತಾರು ರಸ್ತೆ ಕಾಂಕ್ರೀಟೀಕರಣಕ್ಕಾಗಿ ಸಂಸದರಿಗೆ ಮನವಿ

0

ಪುತ್ತೂರು: ಸವಣೂರು ಗ್ರಾಮದ ಪರಣೆ ಅಬ್ಬಜಲಾಯ ಕಟ್ಟೆಯಿಂದ ಅಮೈ ಶಾಲಾ ಮಾರ್ಗವಾಗಿ ಕೂಂಕ್ಯ, ಪಳ್ಳತ್ತಾರಿಗೆ ರಸ್ತೆ ಸೌಲಭ್ಯ ಇದ್ದು, ಈ ರಸ್ತೆ ತೀರ ಹದಗೆಟ್ಟಿದು, ವಾಹನ ಸವಾರರಿಗೆ ತುಂಬಾ ತೊಂದರೆ ಆಗಿದೆ. ಈ ರಸ್ತೆಯನ್ನು ಕೂಡಲೇ ಕಾಂಕ್ರೀಟೀಕರಣ ಮಾಡುವಂತೆ ಒತ್ತಾಯಿಸಿ ಸವಣೂರು ಕುಮಾರಧಾರ ರಿಕ್ಷಾ ಚಾಲಕ -ಮಾಲಕ ಸಂಘದ ಸದಸ್ಯ ಅಪ್ಪಿ ಪೂಜಾರಿ ಮತ್ತು ಅವರ ಬಳಗ ಹಾಗೂ ಸ್ಥಳೀಯರು ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಅವರ ಕುಂಜಾಡಿ ನಿವಾಸದಲ್ಲಿ ಭೇಟಿಯಾಗಿ ಮನವಿ ನೀಡಿದರು. ಮನವಿ ಸ್ವೀಕರಿಸಿದ ಸಂಸದರು ಕೂಡಲೇ ಸ್ಪಂದಿಸುವುದಾಗಿ ಹೇಳಿದರು.

LEAVE A REPLY

Please enter your comment!
Please enter your name here