ಡಿ.31:ಮರೀಲು ಸ್ನೇಹನಗರದಲ್ಲಿ 22ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ

0

ಪುತ್ತೂರು: ಮರೀಲು ಸ್ನೇಹನಗರ ಇಲ್ಲಿನ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಆಶ್ರಯದಲ್ಲಿ 22ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ಡಿ.31 ರಂದು ಸಂಜೆ ಮರೀಲು ಸ್ನೇಹನಗರದ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆಯಲ್ಲಿ ಜರಗಲಿರುವುದು.


ಸಂಜೆ ಕೆಮ್ಮಿಂಜೆ ಶ್ರೀ ಷಣ್ಮುಖ-ಮಹಾವಿಷ್ಣು ದೇವಸ್ಥಾನದ ಮಾಜಿ ಅಧ್ಯಕ್ಷ ತಂತ್ರಿ ಸುಬ್ರಹ್ಮಣ್ಯ ಬಳ್ಳುಕ್ಕುರಾಯಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬಳಿಕ ದರ್ಬೆ ಕುಂಞಮಲೆ ಶ್ರೀ ಸಿದ್ಧಿವಿನಾಯಕ ಭಜನಾ ಸೇವಾ ಟ್ರಸ್ಟ್‌ನಿಂದ ಕುಣಿತ ಭಜನೆ, ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀ ದುರ್ಗಾ ರಂಗಕಲಾ ಚಾವಡಿ ಪುತ್ತೂರು ಅರ್ಪಿಸುವ, ‘ರಂಗ ಮಾಣಿಕ್ಯ’ ಸುಬ್ಬು ಸಂಟ್ಯಾರ್ ವಿರಚಿತ ಸಾಮಾಜಿಕ ಯಕ್ಷ ಹಾಸ್ಯ ಸೌರಭ ಒಕ್ಕುನಾತ್ ತಿಕ್ಕುಜಿ ‘ಕುಸಲ್ದ ನಿಧಿ’ ಪ್ರದರ್ಶನಗೊಳ್ಳಲಿರುವುದು. ಹಿಮ್ಮೇಳದಲ್ಲಿ ಭಾಗವತರಾಗಿ ಶರತ್ ಆಳ್ವ ಚನಿಲ, ಮದ್ದಳೆಯಲ್ಲಿ ರಾಮಯ್ಯ ರೈ ಕಕ್ಕೂರು, ಚೆಂಡೆಯಲ್ಲಿ ರಾಮ್‌ದಾಸ್ ಶೆಟ್ಟಿ ವಗೆನಾಡು, ಚಕ್ರತಾಳದಲ್ಲಿ ನಿಖಿಲ್ ಸುಳ್ಯ, ಮುಮ್ಮೇಳದಲ್ಲಿ ದಿನೇಶ್ ಶೆಟ್ಟಿ ಅಳಿಕೆ, ಚಂದ್ರಶೇಖರ ಸುಳ್ಯಪದವು, ಜೈದೀಪ್ ರೈ ಕೋರಂಗ, ಗಂಗಾಧರ್ ಕೌಡಿಚ್ಚಾರ್, ರಕ್ಷಿತ್ ರೈ ತೊಟ್ಲ, ಅನಿಲ್ ಶೆಟ್ಟಿ ದೇರ್ಲ, ರಂಜಿತ್ ಬೂಡಿಯಾರ್, ಜೀವನ್‌ರಾಜ್ ದೇರ್ಲ, ಯಶಸ್ ರೈ ಕಲ್ಲರ್ಪೆ, ರಕ್ಷಣ್ ಬೆಳ್ಳೂರು, ವಿಖ್ಯಾತ್ ಹಾಡಿಕಲ್ಲು, ಹರೀಶ್ ಶೇಕಮಲೆ, ತೀರ್ಥೇಶ್ ಪೆರ್ಲಂಪಾಡಿರವರು ಭಾಗವಹಿಸಲಿರುವರು.


ಈ ಸಂದರ್ಭದಲ್ಲಿ ಮಹಾಪೂಜೆ, ಅನ್ನಸಂತರ್ಪಣೆ ಜರಗಲಿದ್ದು ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ನವೀನ್ ಗೌಡ ಕ್ಯಾಂಪ್ಕೋ, ಗೌರವಾಧ್ಯಕ್ಷ ರಾಜೇಂದ್ರ ಕೆ.ಮೆಸ್ಕಾಂ, ಕಾರ್ಯದರ್ಶಿ ರವೀಂದ್ರನಾಥ ರೈ, ಕೋಶಾಧಿಕಾರಿ ಹರೀಶ್ ರೈ ಹಾಗೂ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here