ಬೆಳ್ಳಾರೆ ಜೇಸಿಐನಿಂದ ಪುನಶ್ಚೇತನಾ ಶಿಬಿರ

0

ಜೇಸಿಯಿಂದ ವ್ಯಕ್ತಿತ್ವಕ್ಕೆ ಮಾನ್ಯತೆ : ಸವಿತಾರ ಮುಡೂರು

ಪುತ್ತೂರು: ಯುವ ಸಮುದಾಯದ ವ್ಯಕ್ತಿತ್ವ ವಿಕಸನಕ್ಕೆ ಕೊಡುಗೆ ನೀಡುವ ಜೊತೆಗೆ ಜೇಸಿ ವ್ಯಕ್ತಿತ್ವಕ್ಕೆ ಮಾನ್ಯತೆ ನೀಡುವ ಕಾರ್ಯ ಮಾಡುತ್ತದೆ ಎಂದು ಜೇಸಿಐ ವಲಯ ತರಬೇತುದಾರೆ ಸವಿತಾರ ಮುಡೂರು ಹೇಳಿದರು. ಅವರು ಬೆಳ್ಳಾರೆ ಜೇಸಿಐ ವತಿಯಿಂದ ನಡೆದ ಪುನಶ್ಚೇತನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಪೂರ್ವಾಧ್ಯಕ್ಷ ಆರ್ ಕೆ ಬೆಳ್ಳಾರೆ ಶಿಬಿರ ಉದ್ಘಾಟಿಸಿ ಶುಭ ಹಾರೈಸಿದರು. ಬೆಳ್ಳಾರೆ ಜೇಸಿಐ ಅಧ್ಯಕ್ಷ ಜಗದೀಶ್ ರೈ ಪೆರುವಾಜೆ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವಾಧ್ಯಕ್ಷ ರವೀಂದ್ರ ರೈ ಅಜಪಿಲ ಉಪಸ್ಥಿತರಿದ್ದರು. ಕಾರ್ಯದರ್ಶಿ ವಾಸುದೇವ ಪೆರುವಾಜೆ ವಂದಿಸಿದರು.

LEAVE A REPLY

Please enter your comment!
Please enter your name here