ಸಿಪಿಐಎಂ ಮಾಜಿ ಕಾರ್ಯದರ್ಶಿ ಬಾಬು ಪೂಜಾರಿ ನಿಧನ

0

ಪುತ್ತೂರು: ಕೇರಳ-ಕರ್ನಾಟಕ ಗಡಿಭಾಗವಾದ ನೆಟ್ಟಣಿಗೆಮುಡ್ನೂರು ಈಶ್ವರಮಂಗಲ ಸಮೀಪದ ದೇಲಂಪಾಡಿ ಮಯ್ಯಾಳಬಾವ ತರವಾಡಿನ ಬಾಬು ಪೂಜಾರಿ(74 ವ) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಮಂಗಳೂರಿನ ಖಾಸಗಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ದೇಲಂಪಾಡಿ ಸಿಪಿಎಂ ಸಮಿತಿಯ ಮಾಜಿ ಕಾರ್ಯದರ್ಶಿಯಾಗಿ, ಪ್ರಾದೇಶಿಕ ಸಮಿತಿ ಸದಸ್ಯರಾಗಿ, ಮಯ್ಯಾಳ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿ ಮಾಜಿ ಉಪಾಧ್ಯಕ್ಷರಾಗಿ ಸೇರಿದಂತೆ ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಇವರು ಪತ್ನಿ ಲೀಲಾವತಿ, ಪುತ್ರರಾದ ರವಿ ಮಯ್ಯಾಳ, ಸತೀಶ್‌ ಮಯ್ಯಾಳ, ಪುತ್ರಿಯರಾದ ಪುಷ್ಪಲತ, ವಿಜಯ, ಶಾಲಿನಿ, ಅಳಿಯಂದಿರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here