ಜ.8 :ಸಾಯ ಎಂಟರ್‌ಪ್ರೈಸಸ್‌ನವರ ಸಹ ಸಂಸ್ಥೆ ಭಾರತೀಯ ಜನ ಔಷಧಿ ಕೇಂದ್ರ ಶುಭಾರಂಭ

0

ಪುತ್ತೂರು:ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಮಳಿಗೆ ಎಪಿಎಂಸಿ ರಸ್ತೆಯಲ್ಲಿರುವ ಸಾಯ ಎಂಟರ್‌ಪ್ರೈಸಸ್‌ನ ಸಹ ಸಂಸ್ಥೆ ಪ್ರಧಾನ ಮಂತ್ರಿ ಭಾರತೀಯ ಜನ ಔಷಧ ಕೇಂದ್ರ ಜ.8ರಂದು ಎಪಿಎಂಸಿ ರಸ್ತೆಯ ಜೆಎಂಜೆ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಳ್ಳಲಿದೆ.


ನೂತನ ಮಳಿಗೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಗೋವಿಂದ ಪ್ರಕಾಶ್ ಸಾಯ, ಸಂಧ್ಯಾ ಸಾಯ ಹಾಗೂ ಪ್ರಜ್ವಲ್ ಸಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here