ಅಂಕತ್ತಡ್ಕ ನೇತ್ರಾವತಿ ಗರಡಿಯಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಚಪ್ಪರ ಮೂಹೂರ್ತ ಕಾರ್ಯಕ್ರಮ

0

ಕೆಯ್ಯೂರು: ಅಂಕತ್ತಡ್ಕ ಕೋಟಿ ಚೆನ್ನಯ ನಗರದಲ್ಲಿ ಜ.7ರಂದು ಶ್ರೀ ಬ್ರಹ್ಮ ಬೈದೆರುಗಳ ಪೂಂಜಿರೊಟು ಅಂಕತ್ತಡ್ಕ ನೇತ್ರಾವತಿ ಗರಡಿಯಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬ್ರಹ್ಮ ಬೈದೆರುಗಳಿಗೆ ಪ್ರಾರ್ಥನೆ ಸಲ್ಲಿಸಿ, ಚಪ್ಪರ ಮೂಹೂರ್ತ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ, ಆಡಳಿತ ಸಮಿತಿ ಅಧ್ಯಕ್ಷ ಕೆ.ಎಸ್ ಪದ್ಮನಾಭ ಭಂಡಾರಿ, ಉಪಾಧ್ಯಕ್ಷ ಚಂದ್ರಶೇಖರ ಭಂಡಾರಿ ಮುಚ್ಚೂರು, ಖಜಾಂಚಿ ಪ್ರವೀಣ್ ಭಂಡಾರಿ ಪೂಂಜಿರೋಟು, ಕಾರ್ಯಕಾರಿ ಸಮತಿ ಸದಸ್ಯರಾದ ಸುಬ್ರಾಯ ಗೌಡ, ತಾರಾನಾಥ ಕಂಪ, ಮೋಹನ್ ಗೌಡ, ವೈದಿಕ ಸಮಿತಿ ಸಂಚಾಲಕ ಬಿ.ಪಿ ವಿಶ್ವನಾಥ ಬೊಳಿಕಲ ಸುಳ್ಯ, ವೀಣಾ ಪದ್ಮನಾಭ ಭಂಡಾರಿ ಕೈಕಂಬ, ದುರ್ಗಾ ಚಂದ್ರಶೇಖರ ಭಂಡಾರಿ ಮುಚ್ಚೂರು, ಮೋನಪ್ಪ ಗೌಡ,  ನಾಗರಾಜ ಶೆಟ್ಟಿ, ಭರತ್, ರವೀಂದ್ರ ರೈ , ಪುನೀತ್, ಸಂಜೀವ ಪೂಜಾರಿ, ಸೌರವ್ ಬಿ.ಪಿ, ಸ್ಪೂರ್ತಿ ಬಿ.ಪಿ,  ಪ್ರಮೋದ್ ಹೆಗ್ಡೆ, ಸೀತಾರಾಮ ರೈ, ಹರೀಶ್ ಕೆ.ಜಿ, ಮೋನಪ್ಪ, ನವೀನ್ ಬಿ.ಕೆ, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here