ಪುಣಚ ಸಂಕೇಶ- ಕೊಡಂಗೆ ಧೂಮಾವತಿ ದೈವದ ನೇಮೋತ್ಸವ

0

ಪುಣಚ: ಪುಣಚ ಬೈಲುಗುತ್ತು ಸಂಕೇಶ ಕೊಡಂಗೆ ಗ್ರಾಮದೈವ ಶ್ರೀ ಧೂಮಾವತಿ ದೈವದ ನೇಮೋತ್ಸವ ಸಂಕೇಶ ಕೊಡಂಗೆ ದೈವಸ್ಥಾನದಲ್ಲಿ ಜ.7ರಂದು ನಡೆಯಿತು.
ಜ.6ರಂದು ಬೆಳಿಗ್ಗೆ ಗುರುರಾಜ್ ಕುಂಟುಕುಡೇಲು ರವರ ಪೌರೋಹಿತ್ಯದಲ್ಲಿ ನಾಗತಂಬಿಲ ನಡೆದು ರಾತ್ರಿ ಪುದುಕೋಲ ನೇಮೋತ್ಸವ ನಡೆಯಿತು.
ಜ.7ರಂದು ಬೆಳಿಗ್ಗೆ ಗ್ರಾಮ ದೈವ ಶ್ರೀ ಧೂಮಾವತಿ ದೈವದ ನೇಮೋತ್ಸವ ನಡೆದು, ಹರಿಕೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
ಬೈಲುಗುತ್ತು ಕುಟುಂಬದ ಯಜಮಾನ ಜಗನ್ನಾಥ ರೈ, ಬೈಲುಗುತ್ತು ಕುಟುಂಬಸ್ಥರು, ಬಂಧುಗಳು, ಸಂಕೇಶ ಕೊಡಂಗೆ ಸಾಲ್ಯಾನ್ ಕುಟುಂಬಸ್ಥರು, ಬಂಧುಗಳು, ನಾಗಪ್ಪ ಪೂಜಾರಿ ಸಂಕೇಶ ಕೊಡಂಗೆ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡು ದೈವಗಳ ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here