ಜ.14: ಕೊಯಿಲ ಸದಾಶಿವ ದೇವಸ್ಥಾನದಲ್ಲಿ ಸಾಮೂಹಿಕ ಕುಣಿತ ಭಜನೆ-ಹೆಸರು ನೋಂದಾವಣೆಗೆ ಸೂಚನೆ

0

ರಾಮಕುಂಜ: ಕಡಬ ತಾಲೂಕಿನ ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನ ಹಾಗೂ ಶ್ರೀ ಸದಾಶಿವ ಭಜನಾ ಪರಿಷತ್ ವತಿಯಿಂದ ಎಲ್ಲಾ ದೇವಾಲಯಗಳ ಸಹಯೋಗದಿಂದ ಜ.14ರಂದು ಆತೂರು ಶ್ರೀ ಸದಾಶಿವ ದೇವಸ್ಥಾನದ ಮೈದಾನದಲ್ಲಿ ಸಾಮೂಹಿಕ ಕುಣಿತ ಭಜನೆ ನಡೆಯಲಿದೆ ಎಂದು ಕೊಯಿಲ ಆತೂರು ಶ್ರೀ ಸದಾಶಿವ ಭಜನಾ ಪರಿಷತ್ ಅಧ್ಯಕ್ಷ ಯದುಶ್ರೀ ಆನೆಗುಂಡಿ ತಿಳಿಸಿದ್ದಾರೆ.


ಸಂಜೆ 3 ರಿಂದ 9ರ ತನಕ ಹಾಡಿಗೆ ಮಂಡಲದಲ್ಲಿ ಸಾಮೂಹಿಕ ಕುಣಿತ ಭಜನೆ ನಡೆಯಲಿದ್ದು ಎಲ್ಲಾ ತಂಡಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಇದು ಸ್ಪರ್ಧೆ ಅಲ್ಲ, ಭಾಗವಹಿಸುವ ತಂಡಗಳಿಗೆ ಸ್ಮರಣಿಕೆ, ಗೌರವಾರ್ಪಣೆ ಮಾಡಲಾಗುವುದು. ತಂಡದಲ್ಲಿರುವ ಭಜಕರ ಸಂಖ್ಯೆ 6 ರಿಂದ 12ರ ಒಳಗೆ ಇರತಕ್ಕದ್ದು. ಹೆಚ್ಚು ಸಂಖ್ಯೆ ಇದಲ್ಲಿ ಹೊಸ ತಂಡ ರಚಿಸಿ ಸಾಮೂಹಿಕ ಕುಣಿತ ಭಜನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಆಸಕ್ತರು 10-1-2024ರೊಳಗೆ ಪ್ರಕಾಶ್ ಕೆ.ಕೆಮ್ಮಾರ, ಮೊಬೈಲ್ ಸಂಖ್ಯೆ-9164955239ಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಎಂದು ಅವರು ತಿಳಿಸಿದ್ದಾರೆ.

==========================================================

LEAVE A REPLY

Please enter your comment!
Please enter your name here