ಹೊಸಬೆಳಕು ಆರ್ಲಪದವು, ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ವತಿಯಿಂದ ಶ್ರೀರಾಮನ ಕುರಿತು ಸಂಗೀತ ಸ್ಪರ್ಧೆ

0

ಪುತ್ತೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಮತ್ತು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಹೊಸಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟ್ ಪಾಣಾಜೆ ಮತ್ತು ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ಇದರ ವತಿಯಿಂದ ಶ್ರೀರಾಮ ಕುರಿತಾದ ಸಂಗೀತ ಸ್ಪರ್ಧೆ ಆಯೋಜಿಸಲಾಗಿದೆ. ಜ್ಯೂನಿಯರ್, ಸೀನಿಯರ್ ವಿಭಾಗದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಯಾವುದೇ ಮ್ಯೂಸಿಕ್ ಉಪಕರಣಗಳಿಲ್ಲದೇ ಶ್ರೀರಾಮನ ಕುರಿತಾದ ಮಾತ್ರ ಹಾಡಿರಬೇಕು. ಹಾಡು ಕಳುಹಿಸಲು ಕೊನೆಯ ದಿನಾಂಕ ಜ.18 ಆಗಿರುತ್ತದೆ. ಹಾಡಿನ ಜೊತೆಗೆ ಮಗುವಿನ ಹೆಸರು, ಹೆತ್ತವರ ಹೆಸರು, ಊರು ಫೋನ್ ನಂಬರ್ ಕಡ್ಡಾಯವಾಗಿರುತ್ತದೆ‌.

ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳಿರುತ್ತವೆ. ಅಲ್ಲದೇ ಭಾಗವಹಿಸಿದ ಪ್ರತಿಯೋರ್ವರಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ಹಾಡುಗಳನ್ನು ಕಳುಹಿಸುವವರು 9731298031, 9901854363 ಗೆ ಕಳುಹಿಸಬೇಕು ಎಂದು ಆಯೋಜಕರಾದ ಕಿಶೋರ್ ಆರ್ಲಪದವು ಹಾಗೂ ನವೀನ್ ನಗರ ಸಿಟಿಗುಡ್ಡೆ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here