ಕುಳ್ಳಾಜೆ(ನಟ್ಟಿ)ಈಶ್ವರ ನಾಯಕ್ ಅವರಿಗೆ ನೆಲ್ಯಾಡಿ ಶ್ರೀರಾಮ ವಿದ್ಯಾಲಯದಲ್ಲಿ ಶ್ರದ್ಧಾಂಜಲಿ ಸಭೆ

0

ನೆಲ್ಯಾಡಿ: ಇಲ್ಲಿನ ಶ್ರೀರಾಮ ವಿದ್ಯಾಲಯ ಮತ್ತು ಹಲವು ಶಿಕ್ಷಣ ಸಂಸ್ಥೆ ಯ ಬೆಳವಣಿಗೆಗೆ ದಾನಿಯಾಗಿ ಸಹಕರಿಸಿದ ಹಾಗೂ ಸಾಮಾಜಿಕ ಉನ್ನತಿಗಾಗಿ ಅವಿರತವಾಗಿ ಶ್ರಮಿಸಿದ, ಇತ್ತೀಚೆಗೆ ನಿಧನರಾದ ಕಾಂಚನ ನಿವಾಸಿ ನಟ್ಟಿ ಈಶ್ವರ ನಾಯಕ್ ಕುಳ್ಳಾಜೆ ಅವರಿಗೆ ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಲಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ನೆಲ್ಯಾಡಿ ಶ್ರೀರಾಮ ವಿದ್ಯಾಲಯದ ಆಡಳಿತ ಸಮಿತಿಯ ಕಾರ್ಯದರ್ಶಿ ಮೂಲಚಂದ್ರ ಕಾಂಚನ, ಸಮಿತಿ ಸದಸ್ಯರಾದ ಸುಬ್ರಾಯ ಪುಣಚ, ರವಿಚಂದ್ರ ಹೊಸವಕ್ಲು ಅವರು ಸಂದರ್ಭೋಚಿತವಾಗಿ ಮಾತನಾಡಿ ನುಡಿ ನಮನ ಸಲ್ಲಿಸಿದರು. ಇತ್ತೀಚಿಗೆ ಮೃತಪಟ್ಟ ಶಾಲಾ ವಿದ್ಯಾರ್ಥಿಗಳ ಪೋಷಕರಾದ ಬಹುಕಾಲದಿಂದ ಅನಾರೋಗ್ಯ ಪೀಡಿತರಾದ ಯಾಧವ ಗೌಡ ಮತ್ತು ಕಾರು ಅಪಘಾತದಲ್ಲಿ ಮರಣ ಹೊಂದಿದ್ದ ಕುಮಾರ್ ಅವರಿಗೂ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾಲಯದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

LEAVE A REPLY

Please enter your comment!
Please enter your name here