ಕುಂಬ್ರ -ಬಿಜೆಪಿ ಒಳಮೊಗ್ರು ಶಕ್ತಿ ಕೇಂದ್ರದ ಸಭೆ 

0

ಪುತ್ತೂರು:ಭಾರತೀಯ ಜನತಾ ಪಾರ್ಟಿ ಒಳಮೊಗ್ರು ಶಕ್ತಿ ಕೇಂದ್ರದ  ಸಭೆಯು  ಜ.13 ರಂದು ನವೋದಯ ರೈತ ಸಭಾ ಭವನ ಕುಂಬ್ರದಲ್ಲಿ ನಡೆಯಿತು. ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳ “ವಿಕಸಿತ  ಸಂಕಲ್ಪ” ಯಾತ್ರೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ  ಹಾಗೂ  ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ  ಸಲುವಾಗಿ ನಡೆಸಬೇಕಾದ ಸ್ವಚ್ಛತ ಕಾರ್ಯಕ್ರಮದ ಬಗ್ಗೆ  ಭಾ ಜ ಪ  ಪ್ರಮುಖರಾದ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್  ಮತ್ತು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ರವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಈ ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ,  ಎಸ್ ಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಹರೀಶ್ ಬಿಜತ್ರೆ,  ಶಕ್ತಿ ಕೇಂದ್ರ ಸಂಚಾಲಕ ರಾಜೇಶ್ ರೈ ಪರ್ಪುoಜ,  ಭಾ ಜ ಪ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಉಷಾ ನಾರಾಯಣ ಗೌಡ ಉರ್ವ, ಪ್ರಬುದ್ದರ ಪ್ರಕೋಷ್ಠ ಜಿಲ್ಲಾ ಸದಸ್ಯ  ಕೆ ಸುಧಾಕರ ರೈ ಕುಂಬ್ರ ತರವಾಡು , ಎಸ್ ಮಾಧವ ರೈ ಕುಂಬ್ರ, ಸುಧಾಕರ ಆಳ್ವ ಕಲ್ಲಡ್ಕ,  ಪುರಂದರ ಶೆಟ್ಟಿ ಮುಡಾಳ,  ಕರುಣಾ ರೈ ಬಿಜಳ,  ಪ್ರವೀಣ್ ಕೆ ಪಲ್ಲತ್ತಾರು,  ರಾಧಾಕೃಷ್ಣ ಶೆಟ್ಟಿ ಕಲ್ಲಡ್ಕ, ರಾಮಕೃಷ್ಣ ನಾಯ್ಕ್ ಮುಡಾಳ,  ರಾಕೇಶ್ ರೈ ಪರ್ಪುoಜ,  ಸಂಜೀವ ಬೊಳ್ಳಾಡಿ,  ಜಯರಾಮ ಆಚಾರ್ಯ ಕುಟ್ಟಿನೋಪಿನಡ್ಕ,  ಕೆ ರಾಜೇಶ್ ಪಿದಾಪಟ್ಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here