ಜೆಸಿಐ ವಲಯ ನಿರ್ದೇಶಕರಾಗಿ ಕೆ.ಎಂ ದಯಾಕರ ರೈ ಆಯ್ಕೆ

0

ನೆಲ್ಯಾಡಿ: 2024ರ ಜೇಸಿಐ ವಲಯ 15ರ ನಿರ್ದೇಶಕರಾಗಿ ಜೆಸಿಐ ನೆಲ್ಯಾಡಿ ಘಟಕದ ಪೂರ್ವಾಧ್ಯಕ್ಷ ಕೆ.ಎಂ ದಯಾಕರ.ರೈ ಅವರು ಆಯ್ಕೆಯಾಗಿದ್ದಾರೆ. ಕಳೆದ 14 ವರ್ಷಗಳಿಂದ ಜೇಸಿಐ ನೆಲ್ಯಾಡಿ ಘಟಕದ ಸಕ್ರಿಯ ಸದಸ್ಯರಾಗಿರುವ ಇವರು 2023ರಲ್ಲಿ ವಲಯ ನಿರ್ದೇಶಕರಾಗಿ ಆಯ್ಕೆಯಾಗಿದ್ದು ಇತ್ತೀಚೆಗೆ ಪಡುಬಿದ್ರಿಯಲ್ಲಿ ನಡೆದ ವಲಯದ ಪದಗ್ರಹಣ ಸಮಾರಂಭದಲ್ಲಿ ವಲಯ ನಿರ್ದೇಶಕರಾಗಿ ಕೆ.ಎಂ ದಯಾಕರ ರೈ ಅವರು ಪದಸ್ವೀಕಾರ ಮಾಡಿದರು. ನೆಲ್ಯಾಡಿ ಸೇವಾ ಸಹಕಾರಿ ಬ್ಯಾಂಕಿನ ಕಾರ್ಯ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here