ನಿಡ್ಪಳ್ಳಿ ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಗಳ ಜಾತ್ರೋತ್ಸವದ ಧ್ವಜಾರೋಹಣ

0

ನಿಡ್ಪಳ್ಳಿ; ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇಲ್ಲಿಯ ವರ್ಷಾವದಿ ಜಾತ್ರೋತ್ಸವ ಕಾರ್ಯಕ್ರಮ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ್ ತಂತ್ರಿಗಳ ನೇತೃತ್ವದಲ್ಲಿ ಜ.19 ರಿಂದ 24 ರವರೆಗೆ ನಡೆಯಲಿದ್ದು ಜ.19 ರಂದು ಬೆಳಿಗ್ಗೆ ಗುತ್ತು ಚಾವಡಿಯಲ್ಲಿ ಗಣಹೋಮ ನಡೆದು ರಾತ್ರಿ ಗುತ್ತು ಚಾವಡಿಯಿಂದ ಪಿಲಿಭೂತ ಹಾಗೂ ಮಲರಾಯ ದೈವಗಳ ಭಂಡಾರ ಉಳ್ಳಾಕುಲು ಮಾಡಕ್ಕೆ ತೆರಳಿ ಶುದ್ದಿ ಕಲಶ ನಡೆದು ಜ.20 ರಂದು ಪ್ರಾತಃಕಾಲ ಧ್ವಜಾರೋಹಣ ನಡೆಯುವ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು.     

ಅನುವಂಶಿಕ ಆಡಳಿತ ಮೊಕ್ತೇಸರ ಪ್ರವೀಣ್ ಎನ್.ಆರಿಗ ನಿಡ್ಪಳ್ಳಿ ಗುತ್ತು, ಪ್ರಮೋದ್ ಆರಿಗ ನಿಡ್ಪಳ್ಳಿ ಗುತ್ತು, ಭರತ್ ಕುಮಾರ್ ಆರಿಗ ಪುತ್ತೂರು ಪಟ್ಟೆ ಗುತ್ತು, ಹಿರಿಯರಾದ ವಾಸುದೇವ ಭಟ್ ಮುಂಡೂರು, ಬಾರಿಕೆ ಮನೆಯವರು ಹಾಗೂ ಊರ ಭಕ್ತಾದಿಗಳು ಪಾಲ್ಗೊಂಡರು.

LEAVE A REPLY

Please enter your comment!
Please enter your name here