ಕುದ್ಮಾರು ಪಟ್ಟೆಯಲ್ಲಿ ಭಜನಾ ಕಾರ್‍ಯಕ್ರಮ

0

ಪುತ್ತೂರು: ಕುದ್ಮಾರು ಗ್ರಾಮದ ಪಟ್ಟೆಯಲ್ಲಿ ಸುದ್ದಿ ಬಿಡುಗಡೆ ದಿನಪತ್ರಿಕೆಯ ಹಿರಿಯ ವರದಿಗಾರ ಉಮಾಪ್ರಸಾದ್ ರೈ ನಡುಬೈಲು ಅವರ ನಿವಾಸದಲ್ಲಿ ಸವಣೂರು ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿಯವರಿಂದ ಭಜನಾ ಕಾರ್‍ಯಕ್ರಮ ಜರಗಿತು. ಭಜನಾ ಕಾರ್‍ಯಕ್ರಮವನ್ನು ಶ್ರೀಧರ್ ಸುಣ್ಣಾಜೆ, ಗಂಗಾಧರ ಸುಣ್ಣಾಜೆ, ರಾಜೇಶ್ ರೈ ಮುಗೇರು, ಚಂದ್ರಾವತಿ ಸುಣ್ಣಾಜೆ, ಶಶಿಕಲಾ ಇಡ್ಯಾಡಿ, ರಕ್ಷಾ ಸುಣ್ಣಾಜೆ, ಲೋಚನ್ ಸುಣ್ಣಾಜೆ, ತೇಜಸ್ ಚಾಪಲ್ಲ, ಜಿತೇಶ್ ಚಾಪಲ್ಲ, ರಶ್ವಿತ್ ಬಸ್ತಿ, ನಂದೀಶ್ ಬಸ್ತಿ, ಸೃಜನ್ ಎಡ್ತಿಲ, ತನ್ವಿತ್ ಎಡ್ತಿಲ ಹಾಗೂ ಶ್ರೀತ್ ಇಡ್ಯಾಡಿರವರು ನಡೆಸಿಕೊಟ್ಟರು. ಭಜನಾ ತಂಡವನ್ನು ಉಮಾಪ್ರಸಾದ್ ರೈ ನಡುಬೈಲು, ಪ್ರೇಮಲತಾ ರೈ, ತೃಷಾ ರೈರವರುಗಳು ಗೌರವಿಸಿ, ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here