ಯುವ ಒಕ್ಕಲಿಗ ಗೌಡ ಸೇವಾ ಸಂಘ ಈಶ್ವರಮಂಗಲ ವಲಯ ಮಟ್ಟದ ಯುವ ಕ್ರೀಡಾ ಸಂಗಮದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕಾವು: ಯುವ ಒಕ್ಕಲಿಗ ಗೌಡ ಸೇವಾ ಸಂಘ ಈಶ್ವರಮಂಗಲ ವಲಯ ಇವರ ನೇತೃತ್ವದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಈಶ್ವರಮಂಗಲ ವಲಯ ಮತ್ತು ಒಕ್ಕಲಿಗ ಗೌಡ ಮಹಿಳಾ ಘಟಕ, ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಇವರ ಸಹಕಾರದೊಂದಿಗೆ ಈಶ್ವರಮಂಗಲ ವಲಯಕ್ಕೆ ಒಳಗೊಂಡ ಮಾಡ್ನೂರು, ನೆಟ್ಟಣಿಗೆ ಮುಡ್ನೂರು, ಬಡಗನ್ನೂರು, ಪಡವನ್ನೂರು, ನೆಟ್ಟಣಿಗೆ ಬೆಳ್ಳೂರು, ನಿಡ್ಪಳ್ಳಿ ಗ್ರಾಮಗಳನ್ನು ಒಳಪಟ್ಟಂತೆ ವಲಯ ಮಟ್ಟದ ಯುವ ಕ್ರೀಡಾ ಸಂಗಮ-2024 ಕಾರ್ಯಕ್ರಮ ಫೆ.4 ರಂದು ಆದಿತ್ಯವಾರ ಪಟ್ಟೆ ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಜ.21 ರಂದು ಪೇರಿಗೇರಿ ದಯಾನಂದ ಗೌಡ ಇವರ ಮನೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಯುವ ಒಕ್ಕಲಿಗ ಗೌಡ ಸೇವಾ ಸಂಘ ಈಶ್ವರಮಂಗಳ ವಲಯ ಅಧ್ಯಕ್ಷ ಜಗ್ಗನಾಥ ಗೌಡ ಪಟ್ಟೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು, ಕ್ರೀಡಾ ಕಾರ್ಯದರ್ಶಿ ಆಶ್ವಿತ್ ಮಾಡ್ಯಲಮಜಲು, ಜೊತೆ ಕಾರ್ಯದರ್ಶಿ ಶರತ್ ಗೌಡ ಪುಳಿತ್ತಡಿ, ಬಡಗನ್ನೂರು ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷದ ಚಂದ್ರಶೇಖರ ಗೌಡ ಸಾರೆಪ್ಪಾಡಿ, ಅಧ್ಯಕ್ಷ ಶ್ರೀಧರ ಗೌಡ ಕನ್ನಯ, ಸ್ವ ಸಹಾಯ ಒಕ್ಕೂಟದ ಅಧ್ಯಕ್ಷ ಗಿರಿಯಪ್ಪ ಗೌಡ ಅಲಂತಡ್ಕ, ಕಾರ್ಯದರ್ಶಿ ಸಂಧ್ಯಾ ಸಾರೆಪ್ಪಾಡಿ, ವೆಂಕಟ್ರಮಣ ಕನ್ನಯ, ಪ್ರಕಾಶ್ ಕನ್ನಯ, ಸ್ವ ಸಹಾಯ ಟ್ರಸ್ಟ್ ನ ಮೇಲ್ವಿಚಾರಕ ವಿಜಯ ಕುಮಾರ್, ತಾರಾನಾಥ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here