ಹೊಟೇಲ್ ಬಾಬುರಾಯ್(ವುಡ್‌ಸೈಡ್) ನವೀಕರಣಗೊಂಡು ಶುಭಾರಂಭ

0

ಪುತ್ತೂರು: ಬೊಳುವಾರು ಸರ್ಕಲ್ ಸಮೀಪ 1954ರಿಂದ ವ್ಯವಹರಿಸುತ್ತಿದ್ದ ಶುದ್ಧಸಸ್ಯಹಾರಿ ಹೊಟೇಲ್ ಬಾಬುರಾಯ್ ನವೀಕರಣಗೊಂಡು ಪ್ರಭು ಕಾಂಪ್ಲೆಕ್ಸ್‌ನಲ್ಲಿ ಜ.22ರಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಭಾರಂಭಗೊಂಡಿತು.
ಆದರ್ಶ ಆಸ್ಪತ್ರೆಯ ವೈದ್ಯ ಪ್ರಸಾದ್ ಭಂಡಾರಿ, ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ಅರ್ಚಕ ವಿ.ಎಸ್.ಭಟ್ ಹಾಗೂ ಇತರ ಗಣ್ಯರು ದೀಪಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಮಾಜಿ ಶಾಸಕ ಸಂಜೀವ ಮಠಂದೂರು, ಐಡಿಯಲ್ ಲ್ಯಾಬ್‌ನ ಸುಜೀಂದ್ರ ಪ್ರಭು, ಸುಳ್ಯ ಮುಳಿಯ ಜ್ಯುವೆಲ್ಸ್ ಮಾಲಕ ಕೇಶವ, ನ್ಯಾಯವಾದಿ ಶಿವಪ್ರಸಾದ್ ಇ., ರಾಜಶೇಖರ ಜೈನ್, ಅಭಿನಂದನ ಆರಿಗ, ಸುಭಾಶ್ಚಂದ್ರ ಜೈನ್, ನಗರಸಭಾ ಮಾಜಿ ಅಧ್ಯಕ್ಷ ಜೀವಂಧರ ಜೈನ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಶುಭಹಾರೈಸಿದರು. ಹೊಟೇಲ್ ಮಾಲಕ ಶಿವಾನಂದ ಪ್ರಭು ಸ್ವಾಗತಿಸಿ ಗ್ರಾಹಕರ ಸಹಕಾರ ಕೋರಿದರು.
ಹೊಟೇಲ್ ಮಾಲಕರು ಅಯೋಧ್ಯೆಯಲ್ಲಿ ನಡೆದ ಶ್ರೀರಾಮದೇವರ ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ನೇರಪ್ರಸಾರ ವೀಕ್ಷಣೆಗೆ ಎಲ್‌ಇಡಿ ಪರದೆ ಮೂಲಕ ವ್ಯವಸ್ಥೆ ಮಾಡಿದರು.

LEAVE A REPLY

Please enter your comment!
Please enter your name here