ಇಚ್ಲಂಪಾಡಿ: ತಾಲೂಕು/ಗ್ರಾಮೀಣ ಮಟ್ಟದ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಪಂದ್ಯಾಟ

0

ನೆಲ್ಯಾಡಿ: ಇಚ್ಲಂಪಾಡಿ ವಾಲಿಬಾಲ್ ಅಸೋಸಿಯೇಷನ್ ಇದರ ಆಶ್ರಯದಲ್ಲಿ ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಇದರ ಸಹಯೋಗದೊಂದಿಗೆ ತಾಲೂಕು ಮಟ್ಟದ ಮತ್ತು ಗ್ರಾಮೀಣ ಮಟ್ಟದ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಪಂದ್ಯಾಟ ಜ.21ರಂದು ಇಚ್ಲಂಪಾಡಿ ಶಾಲಾ ಮೈದಾನದಲ್ಲಿ ನಡೆಯಿತು.


ಇಚ್ಲಂಪಾಡಿ ಸಂತಜಾರ್ಜ್ ಓರ್ಥೋಡೋಕ್ಸ್ ಚರ್ಚ್‌ನ ವಿಕಾರ್ ರೆ.ಫಾ.ವರ್ಗೀಸ್ ತೋಮಸ್ ಅವರು ಉದ್ಘಾಟಿಸಿದರು. ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲು ಅಧ್ಯಕ್ಷತೆ ವಹಿಸಿದ್ದರು.


ಮಂಗಳೂರು ಮಹಾನಗರ ಪಾಲಿಕೆ ಕಾರ್ಪೊರೇಟರ್ ಎ.ಸಿ.ವಿನಯ ರಾಜ್, ಇಚ್ಲಂಪಾಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶುಭಕರ ಹೆಗ್ಡೆ, ವಾಲಿಬಾಲ್ ರಾಷ್ಟ್ರೀಯ ತೀರ್ಪುಗಾರ ಜೋಸೆಫ್ ಪಿ.ವಿ., ಕಡಬ ಮೆಸ್ಕಾಂ ಎಇಇ ಸಜಿ ಕುಮಾರ್, ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಮೈಕಲ್ ಒ.ಜೆ., ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಲಕ್ಷ್ಮೀನಾರಾಯಣ ರಾವ್ ಆತೂರು, ಕಾರ್ಯದರ್ಶಿ ಮೊಹಿತ್ ಏನೆಕಲ್ಲು ಏನೆಕಲ್ಲು, ಇಚ್ಲಂಪಾಡಿ ನೇರ್ಲ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ವಸಂತ್, ತಾ.ಪಂ.ಮಾಜಿ ಅಧ್ಯಕ್ಷೆ ವಲ್ಸಮ್ಮ ಕೆ.ಟಿ., ತಾ.ಪಂ.ಮಾಜಿ ಸದಸ್ಯ ಭಾಸ್ಕರ ಎಸ್.ಗೌಡ, ಕೌಕ್ರಾಡಿ ಗ್ರಾ.ಪಂ.ಸದಸ್ಯರಾದ ರೋಯಿ ಟಿ.ಎಂ., ದಿನೇಶ್ ಬಿ., ಡೈಸಿ ವರ್ಗೀಸ್, ರತ್ನಾವತಿಯವರು ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸಂಘಟಕರಾದ ಜಿ.ತೋಮಸ್ ಸ್ವಾಗತಿಸಿದರು. ಉದಯಕುಮಾರ್ ಹೊಸಮನೆ ನಿರೂಪಿಸಿ, ವಂದಿಸಿದರು. ಸಂಘಟಕರಾದ ಮೆಹಿಜಾರ್ಜ್, ಅಶ್ವಿನ್, ಹರೀಶ್ ಶೆಟ್ಟಿ ನೇರ್ಲ ಸಹಕರಿಸಿದರು.

LEAVE A REPLY

Please enter your comment!
Please enter your name here