ಉಪ್ಪಿನಂಗಡಿ: ರಿಕ್ಷಾ ಚಾಲಕರಿಂದ ಗಣರಾಜೋತ್ಸವ

0

ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ಅಟೋ ಚಾಲಕ-ಮಾಲಕರ ಸಂಘದ ವತಿಯಿಂದ ಗಣರಾಜೋತ್ಸವವನ್ನು ಆಚರಿಸಲಾಯಿತು. ಹೊಸ ಬಸ್ ನಿಲ್ದಾಣದ ಬಳಿಯ ರಿಕ್ಷಾ ತಂಗುದಾಣದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ರಾಜೇಶ್ ಕೆ.ವಿ. ಧ್ವಜಾರೋಹಣ ನೆರವೇರಿಸಿದರು.


ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ವರ್ಣಿತ್ ಕುಮಾರ್, ಮುನ್ನವರ್, ಚೈತನ್ಯ ಬಿ.ಎನ್, ಅರ್ಪಿತ ಎ, ಹೃದ್ಯ ಇ ಬಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಸಂಘದ ಗೌರವಾಧ್ಯಕ್ಷ ಶಬೀರ್ ಕೆಂಪಿ, ಗೌರವ ಸಲಹೆಗಾರ ಡಾ.ರಾಜಾರಾಮ್ ಕೆ.ಬಿ, ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರೆಹ್ಮಾನ್ ಯುನಿಕ್, ಯೂನಿಯನ್ ಬ್ಯಾಂಕ್‌ನ ಪ್ರಬಂಧಕ ನಾಗರಾಜ್ ಕೆ, ಮಾಲೀಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷ ಯೂಸುಫ್ ಹಾಜಿ, ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ತಜ್ಞೆ ಡಾ. ಸ್ಮಿತಾ ಎಂ., ದಂತ ವೈದ್ಯ ಡಾ. ಮನೋಜ್, ಸಂಘದ ಅಧ್ಯಕ್ಷ ಫಾರೂಕ್ ಜಿಂದಗಿ ಉಪಸ್ಥಿತರಿದ್ದರು. ಸಂಘದ ಬಿ. ಅಬ್ಬಾಸ್ ಕುದ್ಲೂರು ಸ್ವಾಗತಿಸಿದರು. ಕಲಂದರ್ ಶಾಫಿ ವಂದಿಸಿದರು. ಸೇಸಪ್ಪ ನೆಕ್ಕಿಲು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here