ಜ.25ರಂದು ಕಲ್ಲಡ್ಕ ಬಳಿ ಬೈಕ್‌ ಅಪಘಾತ-ಗಾಯಾಳು ಸೇರ್ತಾಜೆ ಸತ್ಯಪ್ರಸಾದ್‌ ಗೆ ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮುಂದುವರಿದ ಚಿಕಿತ್ಸೆ

0

ಪುತ್ತೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುದ್ರುಬೆಟ್ಟು ಎಂಬಲ್ಲಿ ಜ.25ರಂದು ನಡೆದ ಬೈಕ್‌ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬೈಕ್‌ ಸವಾರ ಸೇರ್ತಾಜೆ ನಿವಾಸಿ ಸತ್ಯಪ್ರಸಾದ್‌(21) ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿಡ್ಪಳ್ಳಿ ಗ್ರಾಮದ ಸೇರ್ತಾಜೆ ಗಣೇಶ್‌ ರೈ ಪುತ್ರ ಸತ್ಯಪ್ರಸಾದ್‌ ಜ.25ರ ರಾತ್ರಿ ಸೇರ್ತಾಜೆಯ ತಮ್ಮ ಮನೆಯಿಂದ ಬೈಕ್‌ ನಲ್ಲಿ ಮಂಗಳೂರಿಗೆ ತೆರಳುವ ದಾರಿಯಲ್ಲಿ ಕಲ್ಲಡ್ಕ ಸಮೀಪದ ಕುದ್ರುಬೆಟ್ಟು ಎಂಬಲ್ಲಿ ಅಪಘಾತಕ್ಕೊಳಗಾಗಿದ್ದರು. ಈ ನಡುವೆ ತಪ್ಪು ಮಾಹಿತಿಯಿಂದಾಗಿ ಜ.27ರಂದು ಗಾಯಾಳು ಮೃತಪಟ್ಟಿರುವುದಾಗಿ ಸುದ್ದಿ ಪ್ರಕಟವಾಗಿತ್ತು. ಸತ್ಯಪ್ರಸಾದ್‌ ಮೃತಪಟ್ಟಿರುವುದಾಗಿ ಸುದ್ದಿ ಹರಡಿದೆ. ಅವರಿಗೆ ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here