ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘ – ತಾ|ಅಧ್ಯಕ್ಷರಾಗಿ ರಾಜೇಶ್ ಕೆ.ಮರೀಲು ಪುನರಾಯ್ಕೆ, ಗೌರವಾಧ್ಯಕ್ಷ ಡಾ.ಎಂ.ಕೆ.ಪ್ರಸಾದ್

0

ಪುತ್ತೂರು:ಬಿ.ಎಂ.ಎಸ್.ಅಟೋ ರಿಕ್ಷಾ ಚಾಲಕ-ಮಾಲಕರ ಸಂಘದ 2024-25ನೇ ಸಾಲಿನ ಕಾರ್ಯನಿರ್ವಾಹಕ ಸಮಿತಿ ಅಧ್ಯಕ್ಷರಾಗಿ ರಾಜೇಶ್ ಕೆ.ಮರೀಲು ಅವರು ಪುನರಾಯ್ಕೆಗೊಂಡಿದ್ದಾರೆ. ಗೌರವಾಧ್ಯಕ್ಷರಾಗಿ ಡಾ.ಎಂ.ಕೆ.ಪ್ರಸಾದ್,ಪ್ರಧಾನ ಕಾರ್ಯದರ್ಶಿಯಾಗಿ ಹೇಮಂತ್ ಎಸ್.ನಗರ, ಕೋಶಾಧಿಕಾರಿಯಾಗಿ ದಯಾನಂದ ಪ್ರಭು ಆಯ್ಕೆಗೊಂಡಿದ್ದಾರೆ.
ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಉಪಾಧ್ಯಕ್ಷರಾಗಿ ಮಾಧವ ಕೋಲ್ಪೆ, ಮಾದಪ್ಪ ನಾಯ್ಕ, ಜನಾರ್ದನ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಆಚಾರ್ಯ, ಸುರೇಶ್ ನಾೖಕ್‌, ನಾರಾಯಣ ಪೂಜಾರಿ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಶಾಂತ್ ಕೃಷ್ಣನಗರ, ನಝೀರ್, ಹರೀಶ್ ಅವರು ಆಯ್ಕೆಗೊಂಡಿದ್ದಾರೆ. ಉಳಿದಂತೆ ಬಿ.ಕೆ.ದೇವಪ್ಪ ಗೌಡ, ಸತೀಶ್ ಪ್ರಭು ಮಣಿಯ, ಶಿವಪ್ಪ ಪೂಜಾರಿ, ಹುಸೇನ್ ಜಿ, ಸುರೇಶ್ ಸುಧಾಕರ್ ನಾಯಕ್, ದಿನೇಶ್ ಗೌಡ, ಚಾಮಯ್ಯ ಬೊಳುವಾರು, ರಂಜನ್ ಬನ್ನೂರು, ಮೋಹನ್ ಹೆಗ್ಡೆ ಬಿ, ರಾಘವೇಂದ್ರ ರೈ, ನಾರಾಯಣ ಗೌಡ , ಬಾಲಕೃಷ್ಣ ಗೌಡ, ವಿಕ್ರಂ ಪರ್ಲಡ್ಕ, ಮಹೇಶ್ ಪ್ರಭು, ಬಿ.ಕೆ ಸುಂದರ ನಾಯ್ಕ ಅವರು ಕಾರ್ಯನಿರ್ವಾಹಕ ಸಮಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.ಕಾನೂನು ಸಲಹೆಗಾರರನ್ನಾಗಿ ವಕೀಲ ಮಾಧವ ಪೂಜಾರಿಯವರನ್ನು ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here