ಅಟ್ಲಾರು ವನದಲ್ಲಿ ವಾರ್ಷಿಕ ಸಾಮೂಹಿಕ ತಂಬಿಲ ಸೇವೆ

0

ಪುತ್ತೂರು: ಬಲ್ನಾಡು ಗ್ರಾಮದ ಅಟ್ಲಾರು ವನದಲ್ಲಿ ಸಪರಿವಾರ ಶ್ರೀವನದುರ್ಗಾ, ನಾಗ, ರಕ್ತೇಶ್ವರಿ ಸನ್ನಿಧಿಯಲ್ಲಿ ಫೆ.1ರಂದು ವಾರ್ಷಿಕ ಸಾಮೂಹಿಕ ತಂಬಿಲ ಸೇವೆ ನಡೆಯಿತು.
ಬೆಳಗ್ಗೆ ಪರಕ್ಕಜೆ ವೇದಮೂರ್ತಿ ಅನಂತನಾರಾಯಣ ಭಟ್‌ ಅವರ ನೇತೃತ್ವದಲ್ಲಿ ಗಣಪತಿ ಹೋಮ ಮತ್ತು ಶ್ರೀಸಾನ್ನಿಧ್ಯಗಳಿಗೆ ತಂಬಿಲ ಸೇವೆ ನಡೆದು, ಸಂಜೆ ದೈವಗಳಿಗೆ ತಂಬಿಲ
ಸೇವೆ ನಡೆಯಿತು. ಪರಕ್ಕಜೆ ವೇದಮೂರ್ತಿ ಶಂಕರನಾರಾಯಣ ಭಟ್‌ ಪರಿವಾರ ದೈವಗಳಿಗೆ ತಂಬಿಲ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಂದೇಶ್‌ ಭಟ್‌, ನಾರಾಯಣ ಭಟ್‌, ಪರಿವಾರ ಸನ್ನಿಧಿಯ ಅಧ್ಯಕ್ಷರು, ಪದಾಧಿಕಾರಿಗಳು, ಊರಿನ ನಾಗರಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here