ಬನ್ನೂರು ಶ್ರೀ ದೆಯ್ಯರೆ ಮಾಡ ಕ್ಷೇತ್ರ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಬನ್ನೂರು ಶ್ರೀ ದೆಯ್ಯೆರೆ ಮಾಡ ಇಷ್ಟ ದೇವತೆ, ರಕ್ತೇಶ್ವರಿ, ಅಣ್ಣಪ್ಪ ಪಂಜುರ್ಲಿ, ಸಾನಿಧ್ಯಗಳ ಬ್ರಹ್ಮ ಕಲಶೋತ್ಸವದ ಆಮಂತ್ರಣಪತ್ರ ಫೆ.2ರಂದು ಕ್ಷೇತ್ರದ ಸಾನಿಧ್ಯದಲ್ಲಿ ಬಿಡುಗಡೆಗೊಳಿಸಲಾಯಿತು.
ಕ್ಷೇತ್ರದ ಗೌರವಾದ್ಯಕ್ಷ ಸುದೇಶ್ ಪೂಂಜಾ ಅವರ ಮಾರ್ಗದರ್ಶನದಂತೆ ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರರಾದ ರಾಜಶೇಖರ್ ಜೈನ್ ನಿರ್ಪಾಜೆ, ಜಯಕುಮಾರ್ ಜೈನ್ ನಿರ್ಪಾಜೆ, ಶ್ರೀಕೃಷ್ಣ ಭಟ್, ಅಧ್ಯಕ್ಷ ವಿಶ್ವನಾಥ ಗೌಡ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎ ವಿ ನಾರಾಯಣ ಅವರು ಆಮಂತ್ರಪತ್ರ ಬಿಡುಗಡೆಗೊಳಿಸಲಾಯಿತು. ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಮೌನೀಶ್, ಬ್ರಹ್ಮ ಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ ರೈ ಕೆಳಗಿನಮನೆ, ಖಜಾಂಜಿ ರಮೇಶ್ ಗೌಡ ನೀರ್ಪಾಜೆ, ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಉಮೇಶ್ ಶೆಟ್ಟಿ ಆನೆಮಜಲು, ಶೇಖರ್ ಬಿರ್ವ ಸಹಿತ ಸಮಿತಿಯ ವಿವಿಧ ಜವಾಬ್ದಾರಿಯಲ್ಲಿರುವ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here