ರಾಜ್ಯ ಗೃಹರಕ್ಷಕ ದಳ, ಪೌರ ರಕ್ಷಣಾ ಅಕಾಡೆಮಿಯ ವಾರ್ಷಿಕ ತರಬೇತಿಯಲ್ಲಿ ಪುತ್ತೂರು ಗೃಹರಕ್ಷಕ ದಳದ ಸಿಬ್ಬಂದಿ ಕೇಶವ ಎಸ್ ಗೆ ಚಿನ್ನದ ಪದಕ

0

ಪುತ್ತೂರು: ಕರ್ನಾಟಕ ರಾಜ್ಯ ಗೃಹರಕ್ಷಕ ದಳ ಮತ್ತು ಪೌರ ರಕ್ಷಣಾ ಅಕಾಡೆಮಿ ಬೆಂಗಳೂರುನಲ್ಲಿ ನಡೆದ ಲಘು ಮತ್ತು ಪ್ರವಾಹ ರಕ್ಷಣಾ ವಾರ್ಷಿಕ ತರಬೇತಿಯಲ್ಲಿ ಪುತ್ತೂರು ಘಟಕದ ಸಿಬ್ಬಂದಿ ಕೇಶವ ಎಸ್ ರವರು ಚಿನ್ನದ ಪದವನ್ನು ಪಡೆದೆಕೊಂಡಿರುತ್ತಾರೆ.


ಮೂಲತಃ ಕೊಳ್ತಿಗೆಯವರಾಗಿದ್ದು ಪ್ರಸ್ತುತ ನರಿಮೊಗರು ನಿವಾಸಿ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರನ್ನು ಗುರುತಿಸಿ ಪೊಲೀಸ್ ಉಪ ಮಹಾ ನಿರ್ದೇಶಕರಾದ ರವಿ ಡಿ ಚೆನ್ನಣ್ಣನವರ್ ಸ್ವಾಗತಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಿಂದ ಪುತ್ತೂರು ಘಟಕದ ಇಬ್ಬರು ಸಿಬ್ಬಂದಿಗಳು ವಾರ್ಷಿಕ ತರಬೇತಿಗೆ ಆಯ್ಕೆಯಾಗಿದ್ದು ಸುಮಾರು 29 ದಿನಗಳ ತರಬೇತಿಯಲ್ಲಿ ಕೇಶವ ಎಸ್ ಅವರು ವಿವಿಧ ಪರೀಕ್ಷೆಗಳನ್ನು ಸಮಗ್ರವಾಗಿ ಎದುರಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಕೇಶವ ಎಸ್ ಅವರು ಪುತ್ತೂರು ನಗರ ,ಸಂಚಾರ, ಪುತ್ತೂರು ಗ್ರಾಮಾಂತರ, ಕಡಬ, ಉಪ್ಪಿನಂಗಡಿ ಪೊಲೀಸ್ ಠಾಣೆಗಳಲ್ಲಿ ಸೇವೆಯನ್ನು ಸಲ್ಲಿಸಿ ಪ್ರಸ್ತುತ ಪುತ್ತೂರು ಸಂಚಾರ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ . ಪುತ್ತೂರು ಘಟಕದ ಗೃಹರಕ್ಷಕ ಸಿಬ್ಬಂದಿಯಾದ ಇವರು 2016ನೇ ಇಸವಿಯಲ್ಲಿ ಇಲಾಖೆಗೆ ಸೇರಿ ಸುಮಾರು ಎಂಟು ವರ್ಷಗಳ ಕಾಲ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿರುತ್ತಾರೆ. ಗ್ರಾ.ಪಂ ತಾ. ಪಂ, ಜಿ.ಪಂ, ವಿಧಾನಸಭೆ, ಲೋಕಸಭಾ ಚುನಾವಣೆ, ತಮಿಳುನಾಡು ಕೇರಳ ರಾಜ್ಯಗಳ ಚುನಾವಣಾ ಕರ್ತವ್ಯ ನಿರ್ವಹಿಸಿರುವ ಇವರು ಸುದ್ದಿ ಆನ್ ಲೈನ್ ವೋಟಿಂಗ್ ಮೂಲಕ ಜನರೇ ಗುರುತಿಸುವ ಸುದ್ದಿ ಅಭಿಯಾನದಲ್ಲಿ ಪ್ರಥಮ ಸ್ಥಾನ ಪಡೆದು ಜನರ ಪ್ರೀತಿಗೂ ಪಾತ್ರರಾಗಿದ್ದರು. ಮೂಲತಃ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿವರಾಗಿರುವ ಇವರು ಪ್ರಸ್ತುತ ನರಿಮೊಗರು ಕಾಳಿಂಗ ಹೀತ್ಲು ವಾಸ್ತವ್ಯ ಹೊಂದಿದ್ದಾರೆ. ಕೇಶವ. ಎಸ್ ರವರು ತಂದೆ ಶಿವಜ್ಞಾನ, ತಾಯಿ ಚಿತ್ರಕಲಾ, ಅಣ್ಣ ಸತೀಶ ರವರ ಜೊತೆ ವಾಸ್ತವ್ಯವನ್ನು ಹೊಂದಿದ್ದಾರೆ.

LEAVE A REPLY

Please enter your comment!
Please enter your name here